ಮೂಢನಂಬಿಕೆ
ಮಂತ್ರಿಸಿ ಕೊಟ್ಟ ಬೂದಿ
ತಯಾರಿಸಿದ ತಾಯತ
ರೋಗವನ್ನು ನಕಳೆವುದೇ?
ಉರುಳುಸೇವೆಗೈದರೆ
ಉಪವಾಸ ಮಾಡಿದರೆ
ಮದುವೆಯು ಆಗುವುದೇ?
ಅರಳೀಮರ ಸುತ್ತಿದರೆ
ನಾಗನಿಗೆ ಹಾಲೆರೆದರೆ
ಮಗುವು ಆಗುವುದೇ?
ನೂರುಕಾಯಿ ಹೊಡೆದರೆ
ಹಣೆಗೆ ಭಸ್ಮ ಇಟ್ಟರೆ
ಪರೀಕ್ಷೆಯು ಪಾಸಾಗುವುದೇ?
ಮಕ್ಕಳ ಬಲಿ ಕೊಟ್ಟರೆ
ಕುರಿಕೋಳಿ ತರಿದರೆ
ಸಂಪತ್ತು ಸಿಗುವುದೇ?
ಕುಲುಕಿ ಹಾಕಿದ ಕವಡೆ
ಕೈ ಮೇಲಿನ ರೇಖೆಯು
ಕೈಹಿಡಿದು ನಡೆಸುವುದೇ?
ಗ್ರಹಾಧರಿತ ಜ್ಯೋತಿಷ್ಯ
ಮೈಮೇಲೆ ಬರುವ ದೇವರು
ನಾಳೆಯದ ಹೇಳುವುದೇ?
ಗಿಣಿ ಆರಿಸಿದ ಚೀಟಿ
ಅಂಜನದಿ ಕಂಡ ಚಿತ್ರ
ಭವಿಷ್ಯವ ತೋರುವುದೇ?
ಮಂತ್ರಕ್ಕೆ,
ಮಾವಿನಕಾಯಿ
ಉದುರುವುದೇ!!!
No comments:
Post a Comment