Friday, 19 September 2014

KANNADA STORY 7- - BAYAKE

ಬಯಕೆ

ಅದೊಂದು ಸುಂದರವಾದ ಮುಂಜಾನೆ. ಬೆಟ್ಟಗಳ ಸಾಲು ನೋಡಲು ಬಹು ಮೋಹಕವಾಗಿತ್ತು. ಇಂದಂತೂ ದಿನಕ್ಕಿಂತ ಹೆಚ್ಚು ಚಂದವಾಗಿ ಕಾಣುತ್ತಿದೆ. ಹಾಲ್ಗಡಲೇ ಆ ಬೆಟ್ಟಗಳ ಮೇಲೆ ಹರಿಯುತ್ತಿದೆ0iÉುೀನೋ ಎಂಬಂತೆ ಅಲ್ಲಿ ಬೆಳ್ಳಿ ಮೋಡಗಳು ಸರಿಯುತ್ತಿದ್ದವು. ಆ ರಮ್ಯ ಮನೋಹರ ದೃಶ್ಯವನ್ನು ನೋಡುತ್ತಾ ನನ್ನನ್ನೇ ನಾನು ಮರೆತಿದ್ದೆ.
ಕೆಲವು ಕ್ಷಣಗಳ ನಂತರ ಒಂದು ಯೋಚನೆ ಬಂತು. ವಿಚಿತ್ರ ಯೋಚನೆ! ಆ ಮೋಡಗಳನ್ನು ಹಿಡಿಯಬೇಕು. ಅಷ್ಟು ಕೆಳಗೆ ಸಾಗುತ್ತಿದ್ದ ಮೋಡಗಳನ್ನು ಹಿಡಿಯಲಾಗದೇ?
ಸರಿ, ಯೋಚನೆ ಬಂದ ಮೇಲೆ ತಡ ಯಾಕೆ? ನಿರ್ಧಾರ ಮಾಡಿ ಹೊರಟೇಬಿಟ್ಟೆ. ಆ ಕಡೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಬೆಟ್ಟದ ಬುಡ ಸಿಕ್ಕಿತು. ಅರ್ಧ ಪ್ರಪಂಚ ಗೆದ್ದಷ್ಟೇ ಸಂತೋಷವಾಗಿತ್ತು.
ಮೇಲೇರುತ್ತಾ ಹೋದೆ. ಮೋಡಗಳ ನಾಡಿನಲ್ಲಿ0iÉುೀ ಇದ್ದೀನೇನೋ ಎನ್ನಿಸಿತು. ಆದರೂ ಕೈಗಟುಕದು. ಇನ್ನೇನು ಸಿಕ್ಕೇ ಬಿಟ್ಟಿತು ಎನ್ನಿವಷ್ಟರಲ್ಲಿ ಮತ್ತೆ ಮೇಲೆ ಹೋಗಿಬಿಡಬೇಕೇ? 
ಅದರ ಹಿಂದೆ ನಾನೂ ಏರುತ್ತಲೇ ಹೋದೆ. ಕೊನೆಗೆ ಇನ್ನೇನು ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಕಾಲು ಜಾರಿದಂತಾಯಿತು. ಕೆಳಗೆ ನೋಡುತ್ತೇನೆ-ಪ್ರಪಾತ. ಒಂದೆಡೆ ಭಯ ಆದರೆ, ಇನ್ನೊಂದೆಡೆ ಭಯವನ್ನು ಮೀರಿದ ಆಸೆ. ಹಾಗೊಂದು ಕ್ಷಣ ಹೀಗೊಂದು ಕ್ಷಣ. ಕೊನೆಗೆ ಆಸೆ0iÉುೀ ಗೆದ್ದು ಬಿಟ್ಟಿತು.
ಇಗೊ. . .. . . ಹಿಡಿದೇ ಬಿಟ್ಟೆ. ಆ ಬೆಳ್ಳಿ ಮೋಡಕ್ಕೆ ಕೈಚಾಚಿದೆ. ಅಯ್ಯೊ. . . . . ಇದೇನಾಯ್ತು. ನಿಂತಿದ್ದ ಬಂಡೆಯಿಂದ ಜಾರಿದ್ದೆ. ಅಮ್ಮಾ. . . .ಇನ್ನೇನು ಗತಿ?
ಬೆಚ್ಚಿ ಬಿದ್ದು ನಿದ್ರೆಯಿಂದ ಎದ್ದು ಕುಳಿತೆ. ಮೈ ಚಿವುಟಿಕೊಂಡು ಅದು ಕನಸೇ ಎಂದು ಖಾತ್ರಿಪಡಿಸಿಕೊಂಡೆ.
ಅಬ್ಬಾ! ಎಂತಹುದರಿಂದ ತಪ್ಪಿಸಿಕೊಂಡೆ, ಮರುಕ್ಷಣವೇ ಆ ಬೆಳ್ಳಿ ಮೋಡಗಳ ಸಾಲು ಕಣ್ಮುಂದೆ ಬಂದು ನಿಂತಿತು. ಸಿಗಲೇ ಇಲ್ಲವಲ್ಲ. ನಿರಾಶೆ ಮೂಡಿತು. ಸ್ವಲ್ಪ ಹೊತ್ತಾದ ನಂತರ ಅನಿಸಿತ್ತು ಆಕಾಶಕ್ಕೆ ಏಣಿ ಹಾಕೋದು ಅಂದ್ರೆ ಇದೇ ಏನೋ.
ಸಾಧಿಸುವಂತಹುದನ್ನು ಬಯಸಬೇಕೇ ಹೊರತು ಗಗನಕುಸುಮವನ್ನಲ್ಲ- ನಿರಾಸೆಯನ್ನು ಒದ್ದೋಡಿಸುವಂತೆ ವಿವೇಕ ಜಾಗೃತವಾಯಿತು. ಮನವನ್ನು ಆವರಿಸಿದ್ದ ಜಡತೆ ದೂರವಾಗುತ್ತಿದ್ದಂತೆ ಕಾಲೇಜಿಗೆ ಹೊರಡಲು ಸಿದ್ಧಳಾಗತೊಡಗಿದೆ.

Friday, 12 September 2014

KANNADA STORY - 6 - NAMMAVARU YAARU?

£ÀªÀÄäªÀgÀÄ 0iÀiÁgÀÄ?

        D¯ÉÆÃa¸ÀÄvÁÛ ºÁUÉ0iÉÄà £ÀqÉzÀgÀÄ, ¸ÀĨÁâ±Á¹ÛçUÀ¼ÀÄ. “¸ÀªÀĸÉåUÉ ¥ÀjºÁgÀªÉãÀÄ”JA§ aAvÉ CªÀgÀ£ÀÄß PÁqÀÄwÛvÀÄÛ. ªÀÄzsÁåºÀß JgÀqÀgÀ Gj©¹®Ä. ¨sÀÆ«Ä-¨sÁ£ÀÄ JgÀqÀÆ Gj0iÀÄÄwÛzÀݪÀÅ. ±Á¹ÛçUÀ¼À ªÉÄʬÄAzÀ ¨ÉªÀgÀÄ zsÁgÁPÁgÀªÁV E½0iÀÄÄwÛvÀÄÛ. DzÀgÀÆ CªÀgÀÄ J®Æè ¤®èzÉ £ÀqÉ0iÀÄÄwÛzÀÝgÀÄ. CªÀgÀ ªÀÄ£À¸ÀÄì vÀ£ÀßµÀÖPÉÌ vÁ£Éà vÀQð¸ÀÄwÛvÀÄÛ.
    C¯Áè, £Á£ÀÄ CªÀgÀ ºÀwÛgÀ PÉýzÁÝzÀgÀÆ K£ÀÄ? £Á¼É-£ÁrzÀÄÝ £ÀqÉ0iÀÄĪÀ zÉêÀgÀ GvÀìªÀPÉÌ ¥Àæ¸ÁzÀ ªÀiÁqÀ®Ä ¸Àé®à eÁUÀ. CzÀPÉÌ CªÀgÀÄ PÉÆlÖ GvÀÛgÀªÉãÀÄ? ¸ÀAzsÁåªÀAzÀ£É ªÀiÁqÀzÉ ¤ÃgÀÆ ¸ÉÆÃQ¸ÀzÀ ±ÁªÀiÁZÁgï ºÉüÀÄvÁÛgÉ, UÀ°ÃeÁzÉæ QèÃ£ï ªÀiÁr¸ÉÆÃzÀÄ PÀµÀÖ”CAvÀ. £ÁgÁ0iÀÄt ªÀÄÆwðUÀ¼ÀÄ - ¢£Á ¨É½UÉÎ, ¸ÀAeÉ zÉêÀ¸ÁÜ£ÀPÉÌ §AzÀÄ ºÉÆÃUÉÆÃAxÀªÀgÀÄ, C0iÉÆå, £ÀªÀÄä VqÀUÀ¼É¯Áè ºÁ¼ÁV ºÉÆÃUÀÛªÉ, E£ÁågÀ£ÁßzÀgÀÆ PÉý.”M§âgÀÄ ªÀÄ£É0iÀĪÀjUÉ ºÀĵÁj®è, CªÀ½UÉ PÀµÀÖªÁUÀÄvÀÛzÉ”JAzÀgÉ, ªÀÄUÀzÉÆ§âgÀÄ, ªÀÄPÀ̼ÀÄ DqÁÛ EvÁðªÉ, PÉAqÀ-¨ÉAQ K£ÁzÀgÀÆ ºÉZÀÄÑ PÀrªÉÄ DzÉæ” - »ÃUÉ ºÀvÀÄÛ ºÀ®ªÀÅ PÀÄAlÄ £É¥ÀUÀ¼ÀÄ. “F d£ÀUÀ¼Éà GvÀìªÀ £ÀqɏɯÃt JAzÀzÀÝ®èªÉÃ? CªÀgÀÄ ªÀiÁqÁÛgÉ, EªÀgÀÄ ªÀiÁqÁÛgÉ, £ÁªÀÇ ªÀÄqÉÆÃt, CªÀjVAvÀ eÉÆÃgÁV JAzÀÄ ºÉýzÀªÀgÀÄ EªÀgÉà C®èªÉÃ? FUÀ J®ègÀÆ EzÀÄ £À£Àß ¸ÀªÀĸÉå J£ÀÄߪÀAvÉ PÉÊPÉÆqÀ«PÉÆAqÀÄ ©nÖzÁÝgÉ. DzÉæ FUÀ K£ÀÄ ªÀiÁqÉÆÃzÀÄ’- ±Á¹ÛçUÀ¼À 0iÉÆÃZÀ£É »ÃUÉ0iÉÄà ªÀÄÄAzÀĪÀgÉ¢vÀÄÛ.
        0iÀiÁgÀÆ ±Á¹ÛçUÀ¼À ¸ÀªÀĸÉå0iÀÄ §UÉÎ vÀ¯É PÉr¹PÉÆArgÀ°®è. CµÉÖà KPÉ ±Á¹ÛçUÀ¼À£ÀÄß M¼ÀPÀgÉzÀÄ MAzÀÄ ¯ÉÆÃl ªÀÄfÓUÉ CxÀªÁ ¥Á£ÀPÀªÀ£ÀÄß ¸ÀºÀ ¤ÃrgÀ°®è. ¨É½UÉάÄAzÀ G¥ÀªÁ¸À«zÀÝ ±Á¹ÛçUÀ½UÉ ©¹°£À°è ¸ÀÄvÁÛr vÀ¯É ¸ÀÄwÛ §AzÀAvÁ¬ÄvÀÄ. £Á¯ÉÌà ºÉeÉÓ ºÁQzÀgÉ zÉêÀ¸ÁÜ£ÀªÉà ¹UÀÄvÀÛzÀ¯Áè JAzÀÄ PÉÆAqÀÄ J¯Éè®Æè ¤®èzÉ ªÀÄÄAzÉ £ÀqÉzÀgÀÄ. DzÀgÉ JgÀqÀÄ ºÉeÉÓ ºÁPÀĪÀµÀÖgÀ°è §¸ÀªÀ½zÀÄ ©zÀÄÝ©lÖgÀÄ.
        d£À ¸ÀAvÉ0iÀÄAvÉ ¸ÀÄvÀÛ®Æ £ÉgÉzÀÄ©lÖgÀÄ. K£ÀÄ, K£ÀÄ JAzÀÄ J®ègÀÆ PÉüÀĪÀªÀgÉÃ, DzÀgÉ 0iÀiÁgÀÆ ±Á¹ÛçUÀ¼À£ÀÄß ªÀÄÄlÖ°®è. PÉ®ªÀjUÉ ±Á¹ÛçUÀ¼À ªÀÄrªÀAwPÉ0iÀÄ ¨sÀ0iÀÄ; EvÀgÀjUÉ vÀªÀÄä vÀªÀÄä PÉ®¸ÀUÀ¼À DvÀÄgÀ.
        C°è0iÉÄ ¤ÃgÀÄ »r0iÀÄÄwÛzÀÝ ¥sÁwªÀiÁ EzÀ£É߯Áè £ÉÆÃrzÀ¼ÀÄ. 0iÀiÁgÁzÀgÀÆ ¤ÃgÀ£ÁßzÀgÀÆ aªÀÄÄQ¸À¨ÁgÀzÉà J¤¹vÀÄ. DzÀgÉ J®ègÀÆ ¸ÀĪÀÄä£É EgÀĪÀÅzÀ£ÀÄß PÀAqÀÄ ªÀÄ£É0iÀÄ M¼ÀUÉÆÃr UÀAqÀ£À£ÀÄß PÀgÉzÀ¼ÀÄ.
       ¨ÉÃqÀ, ¨ÉÃqÀ, DªÉÄÃ¯É ±Á¹ÛçUÀ¼ÀÄ £ÀªÀÄä¤ß°è Ej¸ÀUÉÆqÀĪÀÅ¢®è  ¥ÁµÁ £ÀÄrzÀ.
CzɯÁè DªÉÄÃ¯É 0iÉÆÃa¸ÉÆÃt, ªÉÆzÀ®Ä CªÀjUÉ K£ÁVzÉ £ÉÆÃr.
¥ÁµÁ C°èUÉ ºÉÆÃUÀÄvÀÛ¯Éà ¤ÃgÀÄ vÁ”JAzÀ. ¨ÉÃqÀ,”¨ÉÃqÀ”JAzÀÄ PÉ®ªÀgÀÄ ºÉüÀÄwÛzÀÝgÀÆ ±Á¹ÛçUÀ¼À£ÀÄß JwÛPÉÆAqÀÄ §AzÀÄ ªÀÄ£É0iÀÄ ªÀÄÄA¢£À dUÀİ0iÀÄ ªÉÄÃ¯É £ÉgÀ½£À°è ªÀÄ®V¹ ¤ÃgÀ£ÀÄß aªÀÄÄQ¹zÀ, ±Á¹ÛçUÀ¼Éà ªÉÄ®èUÉ J©â¹zÀ.
        ¤zsÁ£ÀªÁV PÀtÂâlÖ ±Á¹ÛçUÀ½UÉ ¸Àé®à ¸ÀªÀÄ0iÀÄzÀ £ÀAvÀgÀ vÁªÀÅ J°èzÉÝÃªÉ JAzÀÄ CjªÁ¬ÄvÀÄ. ¥sÁwªÀÄ M¼ÀUÀqɬÄAzÀ J¼À¤ÃgÀ£ÀÄß vÀAzÀÄ UÀAqÀ£À PÉÊ0iÀİè PÉÆlÄÖ PÀÄr¹”JAzÀ¼ÀÄ. ¨ÉÃqÀ ¸ÀĪÀÄä¤gÀÄ.
        ±Á¹ÛçUÀ½UÉ ¥ÀÇwð JZÀÑgÀªÁ¬ÄvÀÄ. DzÀgÉ ¸ÀĹۤAzÁV ªÉÄïÉüÀ®Ä «¥sÀ®gÁzÀgÀÄ. ¥sÁwªÀiÁ ±Á¹ÛçUÀ¼ÉÃ, zÀ0iÀÄ«lÄÖ F J¼À¤ÃgÀ£ÀÄß PÀÄr¬Äj. EzÀÄ £ÀªÀÄä ªÀÄgÀ¢AzÀ ¨É½UÉÎ0iÉÄà QvÀÛzÀÄÝ. EzÀPÉÌãÀÆ zÉÆÃµÀ«®èªÀ®è PÀ¼ÀPÀ½¬ÄAzÀ ºÉýzÀ¼ÀÄ. ±Á¹ÛçUÀ½UÉ PÀtÄÛA© §A¢vÀÄ.
       FPÉ0iÀÄ£ÀÄß CªÀgÀÄ ªÉÄèÃZÀÑgÀÄ JAzÀÄ »Ã0iÀiÁ½¹zÀÝgÀÄ. PÀÄr0iÀÄ®Ä ¤ÃgÀÄ E®è¢zÁÝUÀ zÉêÀ¸ÁÜ£ÀzÀ DªÀgÀtzÀ°èzÀÝ ¨Á«¬ÄAzÀ ¤ÃgÀ£ÀÄß PÉÆr JAzÀÄ PÉýzÁUÀ E®èªÉA¢zÀÝgÀÄ. ¥sÁwªÀiÁ ªÀÄPÀ̼ÀÄ ¥Àæ¸ÁzÀPÉÌ §AzÁUÀ PÉÆÃ®Ä »rzÀÄ PÀ½¹zÀÝgÀÄ.
     CªÀgÀ PÀtÚ°è ¤ÃgÀÄ PÀAqÀÄ ¥ÁµÁ, ¥sÁwªÀiÁ¼À£ÀÄß UÀzÀj¹zÀ ¤Ã£ÀÄ CzÀ£ÀÄß vÉUÉzÀÄPÉÆAqÀÄºÉÆÃV M¼ÀVqÀÄ. ºÁUÉ0iÉÄà D zÉêÀ¸ÁÜ£ÀzÀ°ègÀĪÀ gÁdÆUÉ ¤ÃgÀÄ vÀgÀ®Ä ºÉüÀÄ.
        CµÀÖgÀ°è ¥sÁwªÀiÁ ªÀÄUÀ¼ÀÄ, vÁvÁ, PÀÄr vÁvÁ, PÀÄrzÉæ ±ÀQÛ §gÀÄvÉÛ CAvÁ CªÀÄä 0iÀiÁªÁUÀÆè ºÉüÁÛ EvÁð¼É”ªÀÄÄzÁÝV £ÀÄrzÀ¼ÀÄ. ±Á¹ÛçUÀ½UÉ FUÀAvÀÆ vÀªÀÄä §UÉÎ £ÁaPÉ J¤¹vÀÄ. F ªÀÄÄUÀÞ ªÀÄUÀÄ«£ÉÆA¢UÉ vÁªÀÅ £ÀqÉzÀÄPÉÆAqÀ jÃw £É£À¦UÉ §AzÀÄ ¸ÀAPÀl ¥ÀlÖgÀÄ.
        ¤zsÁ£ÀªÁV ¥sÁwªÀiÁ CzÀ£ÀÄß PÉÆqÀªÀiÁä”JAzÀgÀÄ. ¨ÉÃqÀ ±Á¹ÛçUÀ¼ÉÃ, vÀqÉ0iÀįÉwß¹zÀ ¥ÁµÁ. EgÀ° PÉÆqÀ¥Áà, EµÀÄÖ ¢£ÀzÀ ¥Á¥À vÉÆ¼ÉzÀÄ ºÉÆÃUÀÄvÉÛ”JAzÀÄ J¼À¤ÃgÀ£ÀÄß PÀÄrzÀÄ ¤zsÁ£ÀªÁV ªÉÄïÉzÀÄÝ PÀĽvÀÄPÉÆAqÀgÀÄ.
       ±Á¹ÛçUÀ¼ÉÃ, F Gj©¹°£À°è J°è ºÉÆÃV¢Ýj? bÀwæ0iÀÄ£ÁßzÀgÀÆ vÉUÉzÀÄPÉÆAqÀÄ ºÉÆÃUÀ¨ÁgÀ¢vÉÛÃ?”±Á¹ÛçUÀ¼ÀÄ vÀªÀÄä ¸ÀªÀĸÉå0iÀÄ£ÀÄß ºÉýzÀgÀÄ.
      F ¸ÀªÀĸÉåUÉ K£ÀÄ GvÀÛgÀ ºÉüÀ§®è? DvÀ ªÀiË£ÀªÁV0iÉÄà ¤AvÀ. ¥sÁwªÀiÁ CªÀ£À£ÀÄß PÀgÉzÀÄ Q«0iÀİè K£ÉÆÃ ºÉýzÀ¼ÀÄ.
¥ÁµÁ CªÀ¼À£ÀÄß UÀzÀgÀÄwÛgÀĪÀÅzÀ£ÀÄß PÀAqÀÄ ±Á¹ÛçUÀ¼ÀÄ K£ÀzÀÄ ¥ÁµÁ?”PÉýzÀgÀÄ. K¤®è ±Á¹ÛçUÀ¼ÉÔ¸ÀAPÉÆÃZÀ¢AzÀ¯Éà ¤AvÀ.
K£ÀªÀiÁä CzÀÄ? ±Á¹ÛçUÀ¼Éà ¤ªÀÄUÉãÀÆ C¨sÀåAvÀgÀ«®è¢zÀÝgÉ £ÀªÀÄä ªÀÄ£É CAUÀ¼ÀzÀ°è0iÉÄà ªÀiÁrPÉÆ¼Àî° JAzÉ. CzÀPÉÌ CªÀgÀÄ.......¥ÁµÁ ªÀÄzsÀå¥ÀæªÉò¹, CzÀÄ ºÉÃUÉ ¸ÁzsÀå? ¤Ã£ÀÄ ¸ÀÄ«ÄßgÀÄ JAzÀ.
    ±Á¹ÛçUÀ¼ÀÄ K£ÀÆ ªÀiÁvÀ£ÁqÀzÉ D zÀA¥ÀwUÀ¼À£Éßà £ÉÆÃqÀÄvÁÛ PÀĽvÀgÀÄ. ±Á¹ÛçUÀ¼Éà ¤ªÀÄä PÀµÀÖ £ÉÆÃqÀ¯ÁgÀzÉ ºÁUÉAzÉ. ¨ÉÃQzÀÝgÉ £ÁªÀÅ JgÀqÀÄ ¢£ÀUÀ¼À ªÀÄnÖUÉ £À£Àß vÁ¬Ä ªÀÄ£ÉUÉ ºÉÆÃV §wðë. E¯Éèà M¯É ºÁPÉÆ½î, ¸ËzÉãÀÆ E¯Éèà EzÉ. ¥sÁwªÀiÁ ªÀiÁvÀÄ.
     F d£ÀUÀ¼À£Éßà £Á£ÀÄ EµÀÄÖ ¢£À ¥ÀgÀQÃ0iÀÄgÉAzÀÄ zÀÆgÀ«nÖzÀÄÝ” JAzÀÄPÉÆAqÀgÀÄ ±Á¹ÛçUÀ¼ÀÄ.
    ±Á¹ÛçUÀ¼ÉÃ, CªÀ½UÉ PÉ®ªÉǪÉÄä J°è, ºÉÃUÉ ªÀiÁvÀ£ÁqÀ¨ÉÃPÀÄ JAzÀÄ UÉÆvÁÛUÉÆ®è, zÀ0iÀÄ«lÄÖ PÀë«Ä¹©r. £ÀrÃj ¤ªÀÄä£ÀÄß zÉêÀ¸ÁÜ£ÀzÀªÀgÉUÀÆ ©lÄÖ §vÉðãÉ. ¤ÃªÀÅ ªÀÄvÉÛ ¸ÁߣÀ ªÀiÁr Hl ªÀiÁqÀ¨ÉÃPÉÃ£ÉÆ. E£ÉÆßAzÀÄ J¼À¤ÃgÀÄ PÀÄrzÀÄ©r”JAzÀ ¥ÁµÁ J¼À¤ÃgÀ£ÀÄß PÀvÀÛj¸À¯ÁgÀA©ü¹zÀ.
      ±Á¹ÛçUÀ¼ÉÃ, ¤ªÀÄUÉ £ÉÆÃªÀÅAlÄ ªÀiÁrzÀÝgÉ PÀë«Ä¹JAzÀÄ ºÉý, M¼ÀUÉ ºÉÆgÀl ¥sÁwªÀiÁ¼À£ÀÄß vÀqÉzÀÄ, E®èªÀiÁä £Á¼É E°èUÉà §AzÀÄ £ÀªÀÄä PÉ®¸À ªÀiÁrPÉÆ¼ÀÄîvÉÛêÉ. DzÉæ ¤ÃªÀÅ J°èUÀÆ ºÉÆÃUÀ¨ÉÃQ®è”JAzÀgÀÄ. ¥sÁwªÀiÁ ¸ÀAvÉÆÃµÀUÉÆAqÀ¼ÀÄ. ¥ÁµÁ J¼À¤ÃgÀ£ÀÄß PÀvÀÛj¸ÀĪÀÅzÀ£ÀÄß ¤°è¹ D±ÀÑ0iÀÄðZÀQvÀ£ÁV ±Á¹ÛçUÀ¼À PÀqÉ £ÉÆÃrzÀ. EzÁªÀÅzÀ£ÀÆß UÀªÀĤ¸ÀzÉ ±Á¹ÛçUÀ¼ÀÄ ªÀÄUÀÄ«£À PÉÊ »rzÀÄ, ªÀÄÄ¤ß £Á¼É ¥Àæ¸ÁzÀ PÉÆrÛä, §wðÃ0iÀiÁ”JAzÀgÀÄ.

ANONYMOUS ENGLISH POEM - 1


Dear Teacher
Dear Teacher
Try to be a human being,
Not just a teaching machine.
Do not teach only a subject
But rather teach us life.
Let me feel that you are interested in me as a human being
Not just a number in your books.
Do not judge me only by the marks I get in my tests
But rather by the efforts I make
Do not expect of me what is beyond my talent or power
And give me encouragement from time to time.
Do not expect me to think of school and
Studies as the greatest pleasures of life.
They are not, at least for me.
Do not expect me to like most of the subjects you teach,
Other subjects may be interesting too and
Perhaps even more so at least for me
Help me to learn to think and to judge for myself,
Not just, memorise ready-made answers.
Help me rather to find the answers myself
Though this may be painful for both of us.
Listen to the questions I may seriously ask,
However foolish they may sound to you.
If you can listen,
I might learn to listen too.
Be strict enough with me provided you are just.



I know that I need it though outwardly I may
Rebel against it.
Do not ridicule me, especially not before my
Classmates – it hurts.
It will turn me against you.
One earnest but kind word in private will be more effective.
Do not pity me, especially not in front of others.
If I don’t succeed so well, pity can be, so embarrassing.
Do not point out another student in class as
An example to me.
I might hate her and you.
And if I should happen to do well, don’t point
Me out as an example to others.
It would embarrass me very much.
  But an occasional deserved acknowledgement is most welcome.
Remember that once upon a time you were a
Student yourself.
Did you always get the best marks?
And did you not forget a thing?
Please keep studying yourself
And do not mechanically use in class
The same yellow notes
Which you wrote some twenty years ago.
Do not expect a word of thank you ever so often.
I am grateful but I find it difficult to express my gratitude in words.
And so .... thank you ever so much.
Yours loving student.


DRAMATIZED STORY - 1 - DHANIYARA SATYANARAYANA BY KORADKAL SRINIVASA RAO

ಧನಿಯರ ಸತ್ಯನಾರಾಯಣ - ಕೊರಡ್ಕಲ್ ಶ್ರೀನಿವಾಸರಾವ್

{ಕೊರಡ್ಕಲ್ ಶ್ರೀನಿವಾಸರಾವ್ ರವರು ಬರೆದಿರುವ ಕಥೆಗೆ ನಾಟಕ ರೂಪ ನೀಡಲಾಗಿದೆ. ಬಹುತೇಕವಾಗಿ ಅವರದೇ ಸಂಭಾಷಣೆಯನ್ನು ಉಳಿಸಿಕೊಳ್ಳಲಾಗಿದೆ}

ಆರು ವರ್ಷದ ಹುಡುಗ. ಬಾಳೆಯ ಕಂದು ಹೊತ್ತು ಕಷ್ಟಪಟ್ಟು ತರುತ್ತಿದ್ದಾನೆ. ಹೊರಲಾರದ ಹೊರೆ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ವರ್ಗಾಯಿಸುತ್ತಿದ್ದಾನೆ. ಬೆವರುತ್ತಿದ್ದಾನೆ. ಬಿಗಿಯಾಗಿ ಹಿಡಿದರೆ ಜಜ್ಜಿಹೋಗುತ್ತದೇನೊ, ಸಡಿಲವಾಗಿ ಹಿಡಿದರೆ ಜಾರಿ ಬಿದ್ದು ಸುಳಿ ಮುರಿಯುತ್ತದೇನೊ ಎಂದು ಜಾಗರೂಕತೆಯಿಂದ ಹಿಡಿದಿದ್ದಾನೆ.
ತಾಯಿ - ಹೀಗೆ ಹಿಂದೆ ಬಿದ್ದರೆ ಮನೆ ಯಾವಾಗ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೇ? ಬೇಡಾ ಬೇಡಾ ಅಂದ್ರೂ ಕೇಳದೆ ಹೊತ್ತೆ. ಯಾವ ಕರ್ಮಕ್ಕೆ ಅದು. ತೆಗೆದತ್ತ ಒಗೆ. ಬೇಗ ಮುಂದೆ ಬಂದರೆ ಸರಿ. ಇಲ್ಲದಿದ್ದರೆ ನಾನೇ ಅದನ್ನು ಎಳೆದು ಬಿಸಾಡುತ್ತೇನೆ. ( ಅವಳ ಕೈಯಲ್ಲೂ ತಾಯಿ ಮನೆಯಿಂದ ತಂದ ಸಾಮಾನು, ಕಂಕುಳಲ್ಲಿ ಒಂದು ಮಗು ಇದೆ).
ಬೂದ - ಇಲ್ಲಮ್ಮಾ ಭಾರ ಏನಿಲ್ಲ. ನೋಡು, ಬೇಗ ಬೇಗ ಬರ್ತಾ ಇದ್ದೀನಿ. 
ತುಕ್ರಿ - ಅಣ್ಣ ಇಲ್ಲಿ ಕೊಡು (ಸ್ವಲ್ಪ ದೂರ ತಾನು ಕಷ್ಟಪಟ್ಟು ಹೊರುವಳು.)
ಬೂದ - ಅಮ್ಮಾ, ಅಜ್ಜಿ ಹೇಳಿದ್ದಾಳೆ. ಇದನ್ನು ನೆಟ್ಟರೆ ಬಾಳೆಹಣ್ಣು ಗೊನೆ ಸಿಗುತ್ತದಂತಮ್ಮಾ. (ತಾಯಿ ಏನೂ ಮಾತನಾಡದೆ ಸುಮ್ಮನೆ ನಡೆಯುತ್ತಿದ್ದಾಳೆ).
ತುಕ್ರಿ - ಅಮ್ಮಾ, ಅಜ್ಜಿ ಕೊಟ್ಟ ಬಾಳೆಹಣ್ಣು ಎಷ್ಟು ಚೆನ್ನಾಗಿತ್ತು. ನಾಕೇ ನಾಕು ನಂಗೆರಡು, ಅಣ್ಣನಿಗೆರಡು. ಗೊನೇಪೂರ್ತಿ ಆ ಕಾಡ, ನಾಗಿ ತಿಂದುಬಿಟ್ರಂತೆ. ಅದಕ್ಕೆ ಮಾವ ಇದನ್ನು ಕೊಟ್ಟದ್ದು.
ತಾಯಿ - ಸರಿ ಸರೆ, ಬೇಗ ಬೇಗ ನಡೀರಿ. ಬಾಳೆಹಣ್ಣು ಬಿಟ್ರೆ ನಂಗೂ ಸಂತೋಷನೇ. (ಮಕ್ಕಳ ಬಯಕೆಗೆ ತಾಯಿ ಇಲ್ಲವೆನ್ನಲಾರಳು)
ಮನೆ ತಲುಪಿದ ತಕ್ಷಣ ಅಪ್ಪನನ್ನು ಸಮೀಪಿಸಿದ ಮಕ್ಕಳು
ತುಕ್ರಿ - ಅಪ್ಪಾ ನೋಡಿಲ್ಲಿ ನಾವೇನು ತಂದಿದ್ದೀವಿ?
ತೌಡ - ಏನ್ರೋ ಅದು?
ಬೂದ - ಬಾಳೆ ಕಂದು ಅಪ್ಪಾ.
ತೌಡ - ಯಾಕ್ರೋ?
ತುಕ್ರಿ - ಅಪ್ಪಾ ಇದನ್ನು ನೆಟ್ರೆ ನಮಗೆ ಬೇಕಾದಷ್ಟು ಬಾಳೆಹಣ್ಣು ಸಿಗುತ್ತಂತಪ್ಪಾ.
ತೌಡ - ಇದನ್ನಿಲ್ಲಿ ನೆಟ್ರೆ ಧನಿಗಳ ದನಗಳು ನುಗ್ಗೋದಿಲ್ವೇನ್ರೋ. ಅದನ್ನ ನಾವು ಓಡಿಸೋಕಾಗುತ್ತಾ? ಬೇಡ ಬಿಡ್ರೋ.
ತುಕ್ರಿ - ಅಪ್ಪಾ ಅಪ್ಪಾ ಬಾಳೆಹಣ್ಣೂ ಅಪ್ಪಾ.
ತೌಡ - (ಮಕ್ಕಳ ಬಯಕೆ ತೀರಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ, ಸಿಟ್ಟಿನಿಂದ ಏ ಬೇಡ ಅಂತಾ ಒಂದ್ಸಾರಿ ಹೇಳದ್ರೆ ಕೇಳ್ಬೇಕು. ಇಷ್ಟು ದಿನ ಇಲ್ಲೇನಾದ್ರೂ ನೆಟ್ಟಿದ್ವಾ? ನೆಟ್ಟಿದ್ರೂ ಉಳ್ಕೊಂದೈತಾ?
ತಾಯಿ - ಏನೋ ಪಾಪ ಮಕ್ಕಳು ಅಷ್ಟು ಆಸೆ ಪಡ್ತಾ ಇದ್ದಾವೆ. ನಮಗಂತೂ ಬಾಳೆಹಣ್ಣು ಕೊಂಡ್ಕೊಡೋಕೆ ಆಗಲ್ಲ. ಆ ಕಟ್ಟಿಗೆ ಸುತ್ತ ಕಟ್ಟಿ ಒಂಚೂರು ನೆಟ್ಕೊಡಿ.
ತೌಡ - ಆ ಕಟ್ಟಿಗೆ ಒಲೆ ಉರಿಸೋಕೆ ಬೇಡ್ವಾ?
ತಾಯಿ - ಹೇಗೊ ಮಾಡ್ಕೊಂಡ್ರಾಯ್ತು. ಅವಕ್ಕೆ ಯಾಕೆ ನಿರಾಸೆ, ಮಾಡ್ಕಡಿ.
ತೌಡ - ಸರಿ, ಅದನ್ನು ಅಲ್ಲಿ ಇಡ್ರೊ. ಬೆಳಗ್ಗೆ ಎದ್ದು ನೆಟ್ಕೊಡೀನಿ.
ಮಾರನೆ ದಿನ ತೌಡ ಬಾಳೆಕಂದು ನೆಡುತ್ತಾನೆ. ಮಕ್ಕಳು ಸಂತೋಷದಿಂದ ದಿನಾ ಬೆಳಗಾದರೆ ಅದನ್ನು ಮೊದಲು ನೋಡಲು ಬರುತ್ತಾರೆ. ಕೆರೆಯಿಂದ ನೀರು ಹೊತ್ತು ತಂದು ಆರೈಕೆ ಮಾಡುತ್ತಾರೆ. ಅದರೊಂದಿಗೆ ಆ ಮಕ್ಕಳ ಬೆವರೆಷ್ಟು ಸುರಿದಿತ್ತೋ, ಗಿಡ ಬೆಳೆಯಿತು. ಹೂವು ಬಿಟ್ಟಿತು. ಬೆರಳು ಬಿಟ್ಟಿತು. ಬೆರಳುಗಳು ಬಲಿತ ತೋರಕಾಯಿಗಳಾದವು, ಹಣ್ಣುಗಳಾಗುವುದನ್ನು ಎಲ್ಲರೂ ಕಾಯುತ್ತಿದ್ದರು. 
ಬೂದ - (ಗಿಡವನ್ನು ನೋಡುತ್ತಾ) ಅಮ್ಮಾ ಬಾಳೆ ಹಣ್ಣಾಗೋದು ಯಾವಾಗಮ್ಮಾ?
ತಾಯಿ - ಇನ್ನೆರಡು ದಿನ ತಡೀ ಮಗಾ. ಹಣ್ಣು ತಿನ್ನೋವ್ರಂತೆ. 
(ಬೂದ, ತುಕ್ರಿ, ದೂಮ ಖುಷಿಯಿಂದ ಕುಣಿಯಲಾರಂಭಿಸುವರು. ಅಷ್ಟರಲ್ಲಿ ಧಣಿಗಳು ಕಾಣಿಸಿಕೊಳ್ಳುವರು. ತಾಯಿ ಮಕ್ಕಳನ್ನು ಕರೆದುಕೊಂಡು ಒಳಹೋಗುವಳು).
ಧಣಿ - ತೌಡ , ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡೋದು? ಅದೇನು ನಿನ್ನ ತೋಟವೆಂದು ಕೊಂಡಿದ್ದೀಯಾ?
ತೌಡ - (ದೀನತೆಯಿಂದ) ಈ ಮಳೆಗಾಲ ಸಾಗಲಿ, ಕಬ್ಬು ಹೂಡುವ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ಕೊಡುತ್ತೇನೆ ಧಣಿ.
ಧಣಿ - (ಕೋಪದಿಂದ) ಯಾವಾಗ ಕೇಳಿದರೂ ಇಂದಿಲ್ಲ ಮುಂದೆ ಎಂದೆನ್ನುವ ನಿನ್ನ ರೋಗ ಇದ್ದದ್ದೇ. ಆ! ಪರ್ವಾಗಿಲ್ವೆ (ಬಾಳೆಗಿಡದ ಕಡೆ ನೋಡಿ) ಒಳ್ಳೆ ಗೊನೇನೆ ಬಿಟ್ಟಿದೆ.
ತೌಡ - ಹೌದು ಧಣಿ. ಮಕ್ಕಳು ಆಸೆಯಿಂದ ನೆಟ್ಕಂಡವ್ರೆ.
ಧಣಿ- ಒಳ್ಳೇದು. ಒಳ್ಳೇದು. ನಾಡಿದ್ದು ಹುಣ್ಣೀಮೆ. ನಮ್ಮಲ್ಲಿ ಸತ್ಯನಾರಾಯಣ ಪೂಜೆ ಇದೆ. ನಾಳೆ0iÉುೀ ಕಡಿದಿಟ್ಟರೆ ನಾಡಿದ್ದಿಗೆ ಹಣ್ಣಾಗುತ್ತೆ. ಹುಣ್ಣಿಮೆ ಬೆಳಿಗ್ಗೆ ತಂದ್ಕೊಟ್ಟುಬಿಡು. ತಿಳಿತಾ?
ತೌಡ - (ಬರಸಿಡಿಲು ಬಡಿದವನಂತೆ) ಆ!
ಧಣಿ - ಯಾಕೊ ಹೇಳಿದ್ದು ಅರ್ಥಾ ಆಗಿಲ್ವಾ?
ತೌಡ - (ಅಂಜುತ್ತಾ) ಮಕ್ಕಳು ಆಸೆಯಿಂದ ಬೆಳೆಸಿದ್ದು. ಕೆಳಗಿನ ಒಂದೆರಡು ಚಿಪ್ಪಾದರೂ ಮಕ್ಕಳಿಗೆ............
ಧಣಿ- ಮಕ್ಕಳಿಗೆ ರಸಬಾಳೆ ಹಣ್ಣೊ, ಮಣ್ಣೊ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕೈಗೆ ಸುಖ ಕೊಡುತ್ತಾನೆ. ಅದು ಬಿಟ್ಟು ಹೀಗೆಲ್ಲ ಮಾಡೋದ್ರಿಂದ್ಲೆ ನಿತ್ಯ ದರಿದ್ರ ತಪೆÇ್ಪಲ್ಲ ನಿಮಗೆ. (ಹೊರಡುತ್ತ) ನೆನಪಿದೆ ತಾನೆ ನಾಡಿದ್ದು...
(ಮರುದಿನ ತೌಡ ಗೊನೆ ಕಡಿದ. ಮಕ್ಕಳು ಸಂತೋಷದಿಂದ ಕುಣಿದರು. ಹೆಂಡತಿಗೆ ಮಾತ್ರ ವಿಷಯ ತಿಳಿಸಿದ್ದ ತೌಡ. ಒಂದು ಗೋಣಿಚೀಲಕ್ಕೆ ಹಾಕಿದ್ದ. ಹಣ್ಣಾದಾಗ ನೋಡೋಣ ಎಂದು ಅವರಿಗೆ ಹೇಳಿದ್ದ. )
(ಹುಣ್ಣಿಮೆಯ ದಿನ. ಬೂದ ಎದ್ದು ಬಂದು ಬಾಳೆಗೊನೆ ಇಟ್ಟಿದ್ದ ಜಾಗ ನೋಡಿ ಗಾಬರಿಯಿಂದ) 
ಬೂದ - ಅಮ್ಮ, ಅಮ್ಮಾ ಬಾಳೆಗೊನೆ ಎಲ್ಲಮ್ಮಾ ಕಾಣ್ತಾನೇ ಇಲ್ಲ. 
ತುಕ್ರಿ - ಅಮ್ಮಾ ಎಲ್ಲೋಯ್ತಮ್ಮಾ?
ತಾಯಿ - (ದುಃಖವನ್ನು ಮರೆಮಾಚಿ) ಆ ಕಾಳಬೆಕ್ಕು ಬಂದು ತಿಂದೋಯ್ತು.
ಬೂದ: ಆ ಕಾಳ ... ಬೆಕ್ಕು.. ಸತ್ತೇ ಹೋಗ್ಲಿ.    (ಇಬ್ಬರು ದುಃಖ ತಡೆಯಲಾರದೆ ಅಳತೊಡಗಿದರು)
ಬೂದ /ತುಕ್ರಿ - ಅಮ್ಮಾ ನಿಜ ಹೇಳಮ್ಮ. ಬೆಕ್ಕು ಬಾಳೆಹಣ್ಣು ಎಲ್ಲಮ್ಮ ತಿನ್ನುತ್ತೆ. ಗೊನೆ ಹೇಗಮ್ಮಾ ಹೊತ್ಕೊಂಡು ಹೋಯ್ತು?
ತಾಯಿ - ಧಣಿಯೋರ ಮನೇಲಿ ಸತ್ಯನಾರಾಯಣ ಪೂಜೆಯಂತೆ. ಅವರು ಕೇಳಿದ್ರೆಂತೆ ಅಪ್ಪಾ ತಕೊಂಡು ಹೋದ್ರು.
ಬೂದ - ಅಮ್ಮಾ ದೇವ್ರು ಬಾಳೆಹಣ್ಣು ತಿನ್ನುತ್ತಾರಾ? 
ತುಕ್ರಿ - ಅಷ್ಟೂ ತಿಂತಾರಾ ಅಮ್ಮಾ ದೇವ್ರು?
ತಾಯಿ - ಹೋಗ್ಲಿ ಬಿಡಿ. ಇನ್ನೂ 2 - 3 ಕಂದುಗಳಿವೆ. ಯಾವುದಾದರೊಂದು ಬೇಗ ದೊಡ್ಡದಾಗಿ ಗೊನೆ ಹಾಕುತ್ತೆ. ಅದು ಪೂರಾ ನಿಮಗೆ. 
(ಅವರ ಅಳುಮೊರೆ ನೋಡಲಾರದೆ ಒಳಗೆ ಹೋದಳು).
(ಬೂದ, ತುಕ್ರಿ ಸ್ವಲ್ಪ ಹೊತ್ತು ಅಲ್ಲಿಯೇ ಅಳುತ್ತಾ ಕುಳಿತರು. ಇದ್ದಕ್ಕಿದ್ದಂತೆ)
ಬೂದ - ಬಾ ತುಕ್ರಿ, (ಬಾಳೆಕಂದುಗಳಿರುವತ್ತ ಓಡಿದ. ತುಕ್ರಿ ಅವನನ್ನು ಹಿಂಬಾಲಿಸಿದಳು. ಬೂದ ಬಾಳೆಕಂದುಗಳನ್ನು ಮುರಿಯುತ್ತಾ ಅಳುತ್ತಾ) ಇ ಇ ಇ ಇವು ಗೊನೇ ಹಾಕೋದೂ ಬೇಡಾ! ಆ ಆ ಆ ಸತ್ ನಾರ್ಣಾ..... ತಿತಿತ್ತಿನೋದು ಬೇಡಾ. (ಸೀಳಿ ಮುರಿದು ಹಾಕಿ ಅವುಗಳ ಮೇಲೆ ನರ್ತನ ಮಾಡುತ್ತಿದ್ದಾನೆ. ಅಲ್ಲೆಲ್ಲಾ ಕೆಸರೇಳುತ್ತಿದೆ. ತುಕ್ರಿಯೂ ಕುಣಿಯುತ್ತಿದ್ದಾಳೆ. ಎಂತಹ ಆವೇಶ! ಅದೆಂತಹ ನೃತ್ಯ!           

Thursday, 11 September 2014

KANNADA STORY - 5 - ANGULIMALA

ಅಂಗುಲಿಮಾಲ

ಅಂದು ಸಂಜೆ ಬೇಸರದಿಂದ ಹೊರಗೆ ಕುಳಿತಿದ್ದೆ. ಬೆಳಿಗ್ಗೆ ಟೀಚರ್ ಮಾಡಿದ ಅಂಗುಲಿಮಾಲನ ಪಾಠ ನನ್ನ ಮನಸ್ಸನ್ನು ಕದಡಿತ್ತು. ಪಾಠವನ್ನು ಆರಂಭಿಸಿ ಅಂಗುಲಿಮಾಲನ ಚಿತ್ರಣವನ್ನು ನೀಡುವಷ್ಟರಲ್ಲಿ ಬೆಲ್ ಹೊಡೆದಿತ್ತು, ಪಾಠ ಅರ್ಧಕ್ಕೆ ನಿಂತುಹೋಗಿತ್ತು.
ಅದೇಕೊ ಏನೊ ಆ ವ್ಯಕ್ತಿಯ ಬಗ್ಗೆ ಬಹಳ ಅಸಹ್ಯವೆನಿಸಿತು. ಮನುಷ್ಯರ ಹೆಬ್ಬೆರಳುಗಳನ್ನು ಕಡಿದು ಮಾಲೆಯನ್ನು ಹಾಕಿಕೊಂಡ ಆತ ಅದೆಂಥ ಕಟುಕ ಎನಿಸಿತು.
ಟೀ ಕೂಡ ಕುಡಿಯಬೇಕೆನಿಸಿರಲಿಲ್ಲ. ವಾಕಿಂಗ್ ಹೋಗಿದ್ದ ತಾತ ¨ಂದು ಎದುರಿಗೆ ನಿಂತು, “ಏನಾಯ್ತು ನನ್ನ ಪುಟ್ಟಿಗೆ?” ಕೇಳಿದರು.
ತಾತನ ಜೊತೆ ನನ್ನ ಬಾಂಧವ್ಯ ಬಹಳ ಗಾಢ. ನನಗಷ್ಟೆ ಅಲ್ಲ ಅವರು ಇಡೀ ಹಳ್ಳಿಗೆ, ಅಷ್ಟೇಕೆ ಹತ್ತಾರು ಹಳ್ಳಿಗಳಿಗೆ ಬೇಕಾದವರು. ನನ್ನ ಕಷ್ಟದುಃಖಗಳನ್ನೆಲ್ಲಾ ನಾನು ಹಂಚಿಕೊಳ್ಳುತ್ತಿದ್ದದ್ದು ತಾತನ ಜೊತೆಯೇ. ಹಾಗಾಗಿ ತಾತ ಕೇಳಿದ್ದೆ ಸಾಕೆನ್ನುವಂತೆ ನನ್ನ ಮನಸ್ಸಿನ ಭಾವನೆಗಳೆಲ್ಲಾ ಹೊರಬಂದವು.
ತಾತ, ಇವತ್ತು ಅಂಗುಲಿಮಾಲ ಪಾಠ ಮಾಡಿದ್ರು. ನಿನಗ್ಗೊತ್ತಾ ಅವನ ಬಗ್ಗೆ. ಛೀ, ಥೂ ಅಂಥಾ ಪಾಠ ಯಾಕಾದ್ರೂ ಇಡ್ತಾರೋ. ನೆನಸಿಕೊಂಡರೆ ಅಸಹ್ಯ ಅನ್ನಿಸ್ತಾ ಇದೆ.
ತಾತ ನಗುತ್ತಾ, “ಪಾಠ ಪೂರ್ತಿ ಆಗಿಲ್ಲ ಅನಿಸುತ್ತೆಎಂದರು.
ಆಶ್ಚರ್ಯವಾಯಿತು ನನಗೆ. ನಿನಗೆ ಹೇಗೆ ಗೊತ್ತು ತಾತ?”
ಹೇಗೆ ಗೊತ್ತು ಅಂದ್ರೆ......ಸ್ವಲ್ಪ ತಡೆದು, “ನಿನ್ನ ಈ ತಾತ ಕೂಡ ಅಂಗುಲಿಮಾಲನಾಗಿದ್ದಹೇಳಿದರು.
ಶಾಕ್ ಹೊಡೆದಂತಾಯಿತು. ತಾತ, ನೀನು....ಅಂಗುಲಿಮಾಲ.....ಸಾಧ್ಯವೇ ಇಲ್ಲ......ನಮ್ಮ ಪಾಠದಲ್ಲಿ ಬರೋ ಅಂಗುಲಿಮಾಲ ಯಾರು ಗೊತ್ತಾ......ನಿನಗೆ ಗೊತ್ತಿಲ್ಲ ಅನಿಸುತ್ತೆ.
ಬೆರಳನ್ನು ಕಡಿದು ಮಾಲೆ ಹಾಕಿಕೊಂಡವನಲ್ಲವೇ?”
ತಾತ...ನೀನು.....ಕನಸಿನಲ್ಲಿಯೂ ನಾನು ಊಹಿಸಿಕೊಳ್ಳಲಾರೆ. ನಿನ್ನಷ್ಟು ಒಳ್ಳೆಯವರು.......ತಾತನನ್ನು ಅಪ್ಪಿಕೊಂಡು ಅತ್ತುಬಿಟ್ಟೆ.
ನನ್ನನ್ನು ಸಮಾಧಾನ ಮಾಡುತ್ತಾ ತಾತ, “ನಾನು ಹೇಳ್ತಾ ಇರೋದು ಈಗಿನ ನಿಮ್ಮ ತಾತನ ಬಗ್ಗೆ ಅಲ್ಲಮ್ಮ. ಸುಮಾರು 45-50 ವರ್ಷಗಳ ಹಿಂದಿನ ಮಾತು.
ಹಾಗಂದ್ರೆ ಏನು ತಾತ?”
ತಾತ ಮಾತು ಶುರುಮಾಡುವಷ್ಟರಲ್ಲಿ ಅಮ್ಮ ಊಟಕ್ಕೆ ಕರೆದಳು. ಅಮ್ಮ, ಪ್ಲೀಸ್, ಸ್ವಲ್ಪ ಹೊತ್ತಾದ ಮೇಲೆ ಬರ್ತೀವಿಎಂದೆ.
ನೀನು ಯಾವಾಗ ಬೇಕಾದ್ರೂ ಊಟ ಮಾಡು. ಆದ್ರೆ ತಾತನನ್ನು ಕಳಿಸು. ಅವರು ಔಷಧಿ ತೆಗೆದುಕೊಬೇಕು.
ಒಲ್ಲದ ಮನಸ್ಸಿನಿಂದಲೇ ಊಟಕ್ಕೆ ಕುಳಿತೆ. ಊಟ ಮುಗಿಸಿ ಬರೋವರೆಗೆ ಆ ವಿಷಯವೇ ಕೊರೆಯುತ್ತಿತ್ತು.
ತಾತ ನಿದ್ರೆ ಮಾಡಲಿ ಬಿಡುಎಂದು ಅಮ್ಮ ಹೇಳುತ್ತಿದ್ದರೂ ಕೇಳದೆ ತಾತನ ಕೈ ಹಿಡಿದುಕೊಂಡೇ ಅವರ ರೂಮಿಗೆ ಹೋದೆ.
ಛೇರಿನ ಮೇಲೆ ಕುಳಿತುಕೊಂಡು ತಾತ, “ ಈಗ ಹೇಳು ಅಂಗುಲಿಮಾಲನ ಬಗ್ಗೆ ನಿನಗೇನನಿಸಿತು?”
ಅಬ್ಬಾ, ಎಂಥಾ ರಾಕ್ಷಸ? ನೀವೀಗ ನಿಮಗೆ ಸಂಬಂಧಿಸಿದ ಹಾಗೆ ಏನೂ ಹೇಳಿರದಿದ್ದರೆ ನಾನು ಖಂಡಿತಾ ಆ ಪಾಠವನ್ನೇ ಮರೆತುಬಿಡಲು ತಯಾರಿದ್ದೆ.
ಉತ್ತರಿಸಿ ಅವರ ಮುಖವನ್ನು ನೋಡಿದೆ. ಅವರು ಯಾವುದೋ ಲೋಕಕ್ಕೆ ಹೋದಂತಿತ್ತು. ಅವರ ಯೋಚನೆಗೆ ಭಂಗ ತರಲು ನಾನಿಚ್ಛಿಸಲಿಲ್ಲ. ಆದರೆ ಕುತೂಹಲ ತಡೆದುಕೊಳ್ಳಲಾಗದೆ, “ತಾತ, ತಾತಎಂದೆ.
ಆ....ಪುಟ್ಟಿ.....ಈ ಲೋಕಕ್ಕೆ ಬರುತ್ತಾ ತಾತ, “ ಅದು 1942ರ ಕಥೆ. ನನಗಾಗ 20 ವರ್ಷ. ನಾನು ಜೈಲಿನಲ್ಲಿದ್ದೆ.ಆರಂಭಿಸಿದರು.
ಅರೆ, ತಾತ ನೀನು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆಯಾ? 42ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯಿತಂತೆ. ಏನೇನು ಮಾಡಿದೆ ತಾತ? ಇಷ್ಟು ದಿನ ಮತ್ತೆ ನನಗೆ ಹೇಳಿರಲೇ ಇಲ್ಲ. ನಾಳೇನೇ ನನ್ನ ಗೆಳತಿಯರಿಗೆ, ಮಿಸ್‍ಗೆ ಹೇಳ್ತೀನಿಎಂದೆ ಉತ್ಸಾಹದಿಂದ.
ಇಲ್ಲಮ್ಮ, ಆಗ ನಾನು ಜೈಲಿಗೆ ಹೋಗಿದ್ದು ಕೊಲೆ ಮಾಡಿದ್ದರಿಂದಸಹಜವಾಗಿಯೇ ನುಡಿದರು. ಆಘಾತವಾಯಿತು.
ಆಶ್ಚರ್ಯವಲ್ಲವೇ? ಆದರೆ ಪೂರ್ತಿ ಕೇಳು.ಹಾಗೆ ಹೇಳುತ್ತಲೆ ತಾತ ಗತಕ್ಕೆ ಇಳಿದುಹೋದರು.
ಆಗ ನಾವು ಈಗಿನಂತೆ ಸ್ಥಿತಿವಂತರಾಗಿರಲಿಲ್ಲ. ಇರುವ ಜಮೀನನ್ನು ಅಪ್ಪ ಊರಿನ ಜಮೀನುದಾರನ ಹತ್ತಿರ ಅಡವಿಟ್ಟಿದ್ದರು. ಅಸಲಿಗೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ಬೆಳೆದು ಕೊನೆಗೆ ಆ ಜಮೀನುದಾರ ಜಮೀನನ್ನು ನುಂಗಿದ್ದೂ ಅಲ್ಲದೆ ಯಾರಾದರೂ ಜೀತ ಮಾಡಿದ್ರೆ ಮಾತ್ರ ಸಾಲ ತೀರುತ್ತೆ ಅಂದ. ಅಪ್ಪನಿಗೆ ವಯಸ್ಸಾಗಿತ್ತು. ಮನೆ ಹಿರಿಮಗ ನಾನು. ಇನ್ನೇನು ಮಾಡುವುದು? ನಾನೇ ಜೀತಕ್ಕೆ ಸೇರಿದೆ.
ಆ ಜಮೀನುದಾರ ಎಂಥಾ ಕಟುಕ ಅಂದ್ರೆ, ಎಷ್ಟೋ ಬಾರಿ ಇಡೀ ದಿನ ಏನೂ ತಿನ್ನಲು ಕೊಡದೆ ಕತ್ತೆ ತರಹ ದುಡಿಸಿಕೊಳ್ತಿದ್ದ. ನನಗಾಗ ಇನ್ನೂ 16 ವರ್ಷ. ಕಟ್ಟುಮಸ್ತಾಗಿದ್ದೆ. ಹೇಗೋ ದಿನಾ ತಳ್ತಿದ್ದೆ, ಮನೆಯವರ ಕಷ್ಟ ನೋಡ್ಬೇಕಲ್ಲಾ?”
ಆದ್ರೆ ಒಂದಿನ ಆ ಜಮೀನುದಾರ ನನ್ನ ತಪ್ಪೇನೂ ಇಲ್ಲದೇನೆ ಚಾಟೀಲಿ ಹೊಡೆಯಲಾರಂಭಿಸಿದ. ನನಗೆ ಮೊದಲೇ ಮುಂಗೋಪ. ನಾನೂ ಸಿಟ್ಟಿನ ಭರದಲ್ಲಿ ಮರ ಕಡಿಯುತ್ತಿದ್ದ ಮಚ್ಚಿನಿಂದಲೇ ಹೊಡೆದುಬಿಟ್ಟೆ. ಅವನು ಅಲ್ಲೇ ಸತ್ತು ಬಿದ್ದ.
ನೀನು ಮಾಡಿದ್ದು ಸರೀನೇ ತಾತಅಂದೆ ನಾನು.
ನಾನೂ ಹಾಗೆ ಅಂದ್ಕೊಂಡೆ. ಎಲ್ಲರೂ ಓಡಿಹೋಗು ಅಂದ್ರು. ನಾನೇನೂ ಬೇಕೂ ಅಂತಾ ಹೊಡೀಲಿಲ್ಲವಲ್ಲ ಅಂದ್ಕೊಂಡು ಅಲ್ಲೇ ನಿಂತೆ. ಪೆÇೀಲಿಸರು ಅರೆಸ್ಟ್ ಮಾಡಿದ್ರು. ವಿಚಾರಣೆ ಅನ್ನೋ ನಾಟಕ ನಡೀತು. ಜಮೀನುದಾರ ನಮಗೆ ಮಾಡಿದ ಅನ್ಯಾಯದ ಬಗ್ಗೆ ಆ ಜಡ್ಜ ಕೇಳಲೇ ಇಲ್ಲ. 5 ವರ್ಷ ಜೈಲಲ್ಲಿರಬೇಕು ಅಂತ ತೀರ್ಪು ಓದೇ ಬಿಟ್ರು.
ಮುಂದಕ್ಕೆ ಹೇಳಲು ಬಿಡದೆ ನಾನು, “ ಬೇಡ ತಾತ. ಇನ್ಮುಂದೆ ಕಥೆ ಬೇಡ. ನೀನು ಜೈಲಿನಲ್ಲಿ ಕಷ್ಟ ಪಟ್ಟಿದ್ದನ್ನು ನಾನು ಕೇಳಲಾರೆ. ನೀನು ಏನೇ ಮಾಡಿದ್ರೂ ನನ್ನ ಪ್ರೀತಿಯ ತಾತಾನೇ. ಅದೆಲ್ಲಾ ಬೇಡ. ಪ್ಲೀಸ್, ಬೇಡ ತಾತಎಂದೆ.
ಭಯಾ ಆಯ್ತಾ ಪುಟ್ಟಿ? ಅದಕ್ಕೆ ಇಷ್ಟು ದಿನ ಹೇಳಿರಲಿಲ್ಲ. ಆದ್ರೆ ಇಷ್ಟು ಕೇಳಿದ ಮೇಲೆ ಮುಂದಿನ ಕಥೆ ನೀನು ಕೇಳಲೇ ಬೇಕು. ಆಗ್ಲೆ ನಿನಗೆ ಅಂಗುಲಿಮಾಲನ ಬಗ್ಗೆ ಅರ್ಥ ಆಗೋದುಬೆನ್ನು ನೇವರಿಸುತ್ತಾ ಹೇಳಿದರು ತಾತ.
ಬೇಡ ತಾತ, ಆ ಅಂಗುಲಿಮಾಲ ಢಕಾಯಿತ. ಸುಮ್ ಸುಮ್ನೆ ಎಲ್ಲರನ್ನೂ ಸಾಯಿಸ್ತಿದ್ದ. ನೀನು ಹಾಗಲ್ಲ. ನೀನು ನನ್ನ ಒಳ್ಳೆ ತಾತ.
ಪುಟ್ಟಿ ಅಂಗುಲಿಮಾಲನಾಗಿದ್ದ ತಾತ, ಈಗ ನಿನ್ನ ಮುಂದೆ ಇರೋ ತಾತ ಇಬ್ಬರೂ ಬೇರೆಬೇರೆ.
ಮತ್ತೆ ಅಷ್ಟೊತ್ತಿಂದ ನೀವೇ ಅಂತಾ ಹೇಳಿದ್ರಿ?”
ವ್ಯಕ್ತಿ ಒಬ್ನೆ. ಆದ್ರೆ ಮನಸ್ಸು, ಅಂತರಾತ್ಮ ಬೇರೆ ಬೇರೆ.
ತಾತ ನೀನು ಒಗಟೊಗೊಟಾಗಿ ಮಾತಾಡ್ತಾ ಇದ್ದೀಯಾ.
ಕೊಲೆ ಮಾಡಿದ್ದು ನಿನ್ನ ತಾತಾನೇ. ಆಗ ಹಳ್ಳಿ ಜನ ನನ್ನ ಕಂಡ್ರೆ ಹೆದರಿ ನಡುಗ್ತಾ ಇದ್ರು. ಈಗ ಅದೇ ಹಳ್ಳಿ ಜನ ನನ್ನ ಪ್ರೀತಿಸ್ತಾರೆ.
ಹೇಗೆ ತಾತ?”
ಅದನ್ನೇ ಹೇಳೋಕೆ ಹೊರಟಿದ್ದೆ ಪುಟ್ಟಾ. ಆಮೇಲೇನಾಯ್ತು ಅಂದ್ರೆ....ತಾತಾ ಮತ್ತೆ ಗತಕ್ಕೆ ಇಳಿದರು.
ಮೊದಲೇ ಒರಟ ನಾನು. ಜೈಲಿಗೋದ್ಮೇಲೆ ಇನ್ನಷ್ಟು ಒರಟನಾದೆ. ಇಲ್ದೆ ಇದ್ರೆ ಆ ಪೆÇೀಲಿಸ್ನೋರ ಹತ್ತಿರ, ಆ ಕಳ್ಳಕಾಕರ ಮಧ್ಯೆ ಬದುಕೋಕೆ ಸಾಧ್ಯಾನೇ ಇರ್ಲಿಲ್ಲ. ಎಲ್ರೂ ನನ್ನ ಕಂಡ್ರೆ ಹೆದರ್ತಿದ್ರು. ಯಾರೂ ನನ್ನ ತಂಟೆಗೆ ಬರುತ್ತಿರಲಿಲ್ಲ. ನಾನು ಯಾರ ಜೊತೇನೂ ಮಾತಾಡ್ತಾ ಇರ್ಲಿಲ್ಲ. ಯಾರಾದ್ರೂ ಮಾತ್ನಾಡಿದ್ರೆ ಸಿಟ್ಟು ಬರ್ತಿತ್ತು. ಅವರಿಗೆ ಏಟು ಬೀಳ್ತಿತ್ತು. ಹೀಗೆ ಒಂದು ವರ್ಷ ಕಳೀತು.
ಆಗ ನಮ್ಮ ಜೈಲಿಗೆ ಸುಮಾರು ನನ್ನ ವಯಸ್ಸಿನವನೊಬ್ಬ ಬಂದ. ಅವ್ನು ನಮ್ಮ ತರಹ ಇರ್ಲಿಲ್ಲ. ನೋಡೋದಿಕ್ಕೆ ಒಳ್ಳೆ ಶ್ರೀಮಂತರ ಮನೆಯ ವಿದ್ಯಾವಂತ ಹುಡುಗನಂತೆ ಕಂಡಾ. ವಿಚಿತ್ರ ಅನಿಸಿದರೂ ನಾನೇನೂ ತಲೆಕೆಡಿಸಿಕೊಳ್ಳಲಿಲ್ಲ.
ಸ್ವಲ್ಪ ದಿನ ಆದ ನಂತರ ಅವನ ಬಗ್ಗೆ ಬೇಡವೆಂದರೂ ಸುದ್ದಿ ಕಿವಿಗೆ ಬಿತ್ತು. ಆತ ಕ್ರಾಂತಿಕಾರಿ ಅಂತೆ, ಬ್ರಿಟಿಷರನ್ನು ಓಡಿಸಿ ಭಾರತಕ್ಕೆ ಸ್ವಾತಂತ್ರ್ಯ ಬೇಕು ಅಂತಾ ಹೋರಾಟ ಮಾಡ್ತಾ ಇದ್ದಾನಂತೆ ಎಂದು.
ಅಷ್ಟು ದಿನ ಅಂತಹವರ ಬಗ್ಗೆ ಕೇಳಿದ್ದೆ. ಆದ್ರೆ ನೊಡಿರಲಿಲ್ಲ. ಕುತೂಹಲದಿಂದ ಅವನನ್ನು ಗಮನಿಸಿದೆ. ಬಹಳ ಪ್ರಸನ್ನ ಮುಖ. ಯಾವಾಗಲೂ ಹಸನ್ಮುಖಿ. ಆತ ಸಿಟ್ಟು ಮಾಡಿಕೊಂಡಿದ್ದೆ ನಾನು ನೋಡಲಿಲ್ಲ. ಅವನು ಎಲ್ಲರೊಂದಿಗೂ ಮಾತನಾಡುತ್ತಿದ್ದ. ಬಹುಬೇಗ ಎಲ್ಲರ ಸ್ನೇಹ ಸಂಪಾದಿಸಿ ಎಲ್ಲರಿಗೂ ಅಣ್ಣನಾಗಿಬಿಟ್ಟ.
ಆತ ನನ್ನ ಬಳಿಯೂ ಬಂದ. ಆದ್ರೆ ನಾನು ಮಾತನಾಡಲಿಲ್ಲ. ನನಗೆ ಯಾರೂ ಬೇಕಿರಲಿಲ್ಲ. ನನಗೆ ಯಾರ ಬಗ್ಗೆ ನಂಬಿಕೆಯೂ ಇರಲಿಲ್ಲ.
ಇತರರು ಅವನಿಗೆ ನನ್ನ ಬಗ್ಗೆ ಅವನು ಒರಟ. ಅವನ ಸ್ನೇಹ ಬೇಡ. ಅವನು ಏನು ಮಾಡೋಕೂ ಹೇಸೋನಲ್ಲಎಂದು ಹೇಳಿದ್ದನ್ನು ಕೇಳಿದೆ.
ಆ ವಿಚಿತ್ರ ವ್ಯಕ್ತಿ ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ನನ್ನ ಬಳಿಗೆ ಬಂದ. ಒಮ್ಮೆ ನನಗೆ ಸಿಟ್ಟು ತಡೆಯಲಾಗಲಿಲ್ಲ. ಹೊಡೆದೇಬಿಟ್ಟೆ. ತುಟಿಯಿಂದ ರಕ್ತ ಸೋರಲಾರಂಭಿಸಿತು. ಅವನ ಸ್ನೇಹಿತರು ನನ್ನನ್ನು ಹೊಡೆಯಲು ಬಂದರೆ ಅವನೇ ತಡೆದ. ಏನೂ ಮಾತನಾಡದೆ ಹೊರಟುಹೋದ.
ನನಗ್ಯಾಕೋ ಒಂಥರಾ ಅನಿಸಿತು. ಇಂಥಾ ಮನುಷ್ಯನನ್ನು ನಾನು ಎಲ್ಲಿಯೂ ಕಂಡಿರಲಿಲ್ಲ. ನನಗೆ ಯಾರಾದ್ರೂ ಹೊಡೆದಿದ್ರೆ ಅವನ ಕೊಲೆ ಆಗೋಗ್ತಿತ್ತು. ಆದ್ರೆ ಆ ಮನುಷ್ಯ.... ಮೊದಲನೇ ಬಾರಿ ನನ್ನ ಒರಟುತನದಿಂದ ನಂಗೇ ಬೇಜಾರಾಯ್ತು.
ಎರಡು ಮೂರು ದಿನ ಆತನ ಕಣ್ತಪ್ಪಿಸಿ ಓಡಾಡಿದೆ. ಆದ್ರೆ ನಾಲ್ಕನೇ ದಿನ ಆತ ನೇರವಾಗಿ ನನ್ನೆದುರಿಗೆ ಬಂದ. ಆ ಗಾಯ ಇನ್ನೂ ಇತ್ತು. ಒಂದು ರೀತಿ ಕಸಿವಿಸಿ ನನ್ನೊಳಗೆ. ಆದ್ರೆ, ಆಹಾ... ಆ ವಿಚಿತ್ರ ವ್ಯಕ್ತಿ ಮುಗುಳ್ನಕ್ಕ. ನನಗೆ ಗೊತ್ತಿಲ್ಲದಂತೆ ನಾನೂ ಮುಗುಳ್ನಕ್ಕೆ. ಆಮೇಲೆ ಒಂದು ಕ್ಷಣಾನೂ ಅಲ್ಲಿ ನಿಲ್ಲದೆ ಓಡಿಹೋದೆ.
ಮಾರನೇ ದಿನವೂ ಅದೇ ರೀತಿ ನಡೆಯಿತು. ಅದಾದ ಮೇಲೆ ನಾನೂ ಮುಗುಳ್ನಗುತ್ತಿದ್ದೆ. ಆದ್ರೆ ಮಾತನ್ನು ಮಾತ್ರ ಆಡುತ್ತಿರಲಿಲ್ಲ. ಅದೇನೋ ಒಂದು ರೀತಿ ಕೆಟ್ಟ ಹಟ.
ಒಂದು ವಾರ ಕಳೆದ ನಂತರ ಆತ ನೇರವಾಗಿ ನನ್ನ ಬಳಿ ಬಂದು ಕುಳಿತುಕೊಂಡ. ನನಗೆ ಗಾಬರಿಯಾಯಿತು. ಆತ ತನ್ನಲ್ಲಿದ್ದ ಪಗಡೆ ಹಾಸನ್ನು ಹಾಸುತ್ತಾ, ‘ನೀನೇನೋ ಆಟದಲ್ಲಿ ಪ್ರಚಂಡನಂತೆ, ಬರ್ತೀಯಾ ಆಟಕ್ಕೆ?’ ಸವಾಲೆಸೆದ.
ಅರೆ, ಎಂಥೆಂಥವರ ಜೊತೆ ಆಡಿ ಗೆದ್ದಿದ್ದೀನಿ. ನೀನ್ಯಾವ ಮಹಾ? ಬಾ ನೋಡೆ ಬಿಡೋಣಸವಾಲನ್ನು ಅಂಗೀಕರಿಸಿ ದಾಳಗಳನ್ನು ಎಸೆದೆ.
ಆಟದಲ್ಲಿ ಗೆದ್ದಿದ್ದು ನಾನೇ. ಆದರೆ ಅವನೇನೂ ಸಾಮಾನ್ಯ ಆಟಗಾರನಾಗಿರಲ್ಲ. ಆಟವಾದ ಮೇಲೆ ಅವನು, ‘ಎಲ್ಲರು ಹೇಳಿದ್ದು ನಿಜಾನೇ. ನಿಜಕ್ಕೂ ನೀನು ಪ್ರಚಂಡ. ಇನ್ನು ಮುಂದೆ ನೀನೇ ನನ್ನ ಗುರುಎಂದ. ನನಗೆ ಹೆಮ್ಮೆಯೆನಿಸಿತು. ಹೀಗೆ ದಿನನಿತ್ಯ ನನ್ನ ಅವನ ಭೇಟಿ ಆರಂಭವಾಯಿತು.
ಒಂದು ದಿನ ಆಟವಾಡುತ್ತಿರುವಾಗ ಆತ ನನ್ನ ಕಥೆ ಕೇಳಿದ. ಒಂದು ರೀತಿಯ ಅವಮಾನದಿಂದಲೇ ನಡೆದದ್ದನ್ನು ಹೇಳಿದೆ.
ಭೇಷ್, ಎಂಟೆದೆಯ ಭಂಟ ನೀನುಎಂದ. ತಮಾಷೆ ಮಾಡುತ್ತಿದ್ದಾನೇನೋ ಎಂದುಕೊಂಡ್ರೆ, ಇಲ್ಲಾ ನಿಜವಾಗಿ ಹೇಳಿದ್ದ. ನನಗೆ ಬಹಳ ಆಶ್ಚರ್ಯವಾಯಿತು. ಮೊಟ್ಟಮೊದಲ ಬಾರಿ ಯಾರೋ ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದರು. ಆತ ನನ್ನ ಆತ್ಮೀಯ ಅನಿಸಿತು.
ಕ್ರಮೇಣ ಆತ ನನಗೆ ಹತ್ತಿರದವನಾಗಿ ಬಿಟ್ಟ. ನಾನು ಅವನನ್ನು ಅಣ್ಣ ಎಂದು ಕರೆಯಲಾರಂಭಿಸಿದೆ. ಹೀಗೆ ಒಂದು ದಿನ ಮಾತನಾಡುತ್ತಿರುವಾಗ, ಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಪೆÇೀಲಿಸರ ಗುಂಡಿಗೆ ಬಲಿಯಾದ ಬಾಲಕನ ಬಗ್ಗೆ ಹೇಳುತ್ತಿದ್ದ. ನನಗೆ ಸಿಟ್ಟು ತಡೆದುಕೊಳ್ಳಲಾಗಲಿಲ್ಲ. ಅಣ್ಣ ಅವನ್ಯಾರು ಹೇಳು, ನಾನು ಅವ್ನ ಕೊಚ್ಚಿಹಾಕ್ತೀನಿಅಂದೆ. ನಿಜವಾಗ್ಲೂ?’ ನಿನ್ನ ಮೇಲಾಣೆಖಚಿತವಾಗಿ ಹೇಳಿದೆ.’ ‘ಹಾಗಾದ್ರೆ ನನ್ನ ಜೊತೆ ಸೇರ್ತೀಯಾ?’ ಗಾಬರಿಯಾಗುವ ಸರದಿ ನನ್ನದಾಯಿತು. ಅಣ್ಣ, ನಾನು......ಕೊಲೆಗಾರ.....?’ ‘ಗಾಬರಿಯಾಗಬೇಡ.’ ‘ಮತ್ತೆ...... ನಾನು...... ನಿನ್ನ ಜೊತೆ......?’ ‘ಹೌದು ಶಂಕ್ರೂ, ನಿನ್ನ ಆವೇಶ ನಮಗೆ ಬೇಕು. ಆದ್ರೆ ಒಬ್ಬ ಬ್ರಿಟಿಷ್ ವ್ಯಕ್ತಿಯನ್ನ, ಒಬ್ಬ ಜಮೀನುದಾರನನ್ನ ಕೊಂದ್ರೆ ಏನೂ ಪ್ರಯೋಜನವಿಲ್ಲ. ಅವರ ಇಡೀ ಗುಂಪು ಗುಂಪನ್ನೇ ನಾಶಮಾಡಬೇಕು.’ ‘ಗುಂಪುಗುಂಪನ್ನೆ.....ನಾನೊಬ್ನೆ.....?’ ಗೊಂದಲದಿಂದ ಕೇಳಿದೆ. ಇಲ್ಲ ಶಂಕ್ರೂ ನೀನೊಬ್ನೆ ಅಲ್ಲ. ನಿನ್ನಂತೋರು, ನನ್ನಂತೋರು ಸಾವಿರಾರು ಜನ ಇದ್ದಾರೆ. ಎಲ್ರೂ ಸೇರ್ಕೊಂಡ್ರೆ ಆ ಫರಂಗಿಯೋರ್ನ ಹೊಡೆದೋಡಿಸೋದು ಏನೂ ಕಷ್ಟವಿಲ್ಲ. ಅವರು ಹೊರಟು ಹೋದ್ರೆ ಈ ಜಮೀನ್ದಾರ್ರೂ, ಮಾಲೀಕರೂ ಯಾರೂ ಇರೋದಿಲ್ಲ. ಆಗ ನಮ್ಮ ದೇಶ ಸ್ವರ್ಗ ಆಗುತ್ತೆ. ಎಲ್ರೂ ಕಷ್ಟ ಪಟ್ಟು ದುಡೀತಾರೆ, ಹಂಚ್ಕೊಂಡು ಬದುಕ್ತಾರೆ.ಅಣ್ಣ ಆವೇಶದಿಂದ ಮಾತನಾಡಿದ್ದನ್ನು ನಾನು ಆವತ್ತೆ ನೋಡಿದ್ದು. ಅಣ್ಣ ಹೇಳಿದ್ದು ಸರಿ ಅನಿಸಿತು.
ಅಣ್ಣ, ಆದ್ರೆ ನಾನು ಕೊಲೆಗಾರ.... ನನ್ನನ್ನು ನಿಮ್ಮ ಜೊತೆ ಸೇರಿಸ್ಕೋತೀರಾ?’ ಅನುಮಾನದಿಂದಲೇ ಕೇಳಿದೆ. ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ಖಂಡಿತಎಂದ. ಹಿಂದೆ ನಡೆದ್ದದ್ದನ್ನು ಮರೆತುಬಿಡು. ಈಗ ನೀನು ಬದಲಾಗಿದ್ದೀಯಾ. ಯೋಚಿಸುವ ಶಕ್ತಿ ಇದೆ. ನೀನು ಖಂಡಿತ ನಮ್ಮ ಜೊತೆ ಬರಬಹುದು. ಆ ಘಳಿಗೆ ನನ್ನ ಬದುಕಿಗೆ ಹೊಸ ತಿರುವನ್ನು ನೀಡಿತು. ಬುದ್ಧನ ಜೊತೆ ಸೇರಿ ಅಂಗುಲಿಮಾಲ ಬದಲಾದಂತೆ ಅಣ್ಣನ ಜೊತೆ ಸೇರಿ ನಾನೂ ಬದಲಾಗಿಬಿಟ್ಟೆ. ಸ್ವಲ್ಪ ದಿನಗಳ ನಂತರ ಅಣ್ಣನ ಬಿಡುಗಡೆಯಾಯಿತು. ಹೋಗುವ ಮುಂಚೆ ನನಗೆ ಅವನ ವಿಳಾಸ ಕೊಟ್ಟು, ‘ನಿನಗೆ ನಮ್ಮೊಂದಿಗೆ ಸೇರಲು ಯಾವಾಗಲೂ ಸ್ವಾಗತಎಂದು ಹೇಳಿ ಹೋದ.
ಅಣ್ಣನ ಮಾತನ್ನು ಕೇಳಿದ ನಂತರ ಅವನ ಜೊತೆ ಸೇರಬೇಕೆಂದು ತೀರ್ಮಾನ ಮಾಡಿದೆ. ಅದಾದ ಮೇಲೆ ನನ್ನ ನಡತೆ ಪೂರ್ತಿ ಬದಲಾಗಿಹೋಯಿತು. ಒಳ್ಳೆಯ ನಡತೆ ಎಂದು ನನ್ನನ್ನು 1945 ರಲ್ಲಿಯೇ ಬಿಟ್ಟುಬಿಟ್ಟರು.
ಹೊರಗೆ ಬಂದ ಮೇಲೆ ನಾನು ಮಾಡಿದ ಮೊದಲ ಕೆಲಸ ಅಣ್ಣನನ್ನು ಹುಡುಕಿದ್ದು. ಅವನ ಗುಂಪಿನಲ್ಲಿ ನಾನೂ ಸೇರಿಕೊಂಡೆ.
ಎಲ್ಲಿ ಕೆಲಸ ಮಾಡಲಿ ಎಂದು ಕೇಳಿದ್ದಕ್ಕೆ ನಿಮ್ಮ ಹಳ್ಳಿಗೆ ಹೋಗು ಎಂದ. ನನಗೆ ತಕ್ಷಣ ನೆನಪಿಗೆ ಬಂದದ್ದು ಅಂಗುಲಿಮಾಲನ ಕಥೆಯೇ. ಬುದ್ಧ ಕೂಡ ಅಂಗುಲಿಮಾಲನಿಗೆ, ಅವನು ಬೌದ್ಧ ಭಿಕ್ಷುವಾದ ನಂತರ ನಿನ್ನ ಹಳ್ಳಿಗೆ ಹೋಗು ಎಂದಿದ್ದ.
ಅಣ್ಣ ಊರ ಜನರಿಗೆ ನನ್ನ ಮೇಲೆ ಸಿಟ್ಟಿದೆ, ಭಯವಿದೆ. ನನ್ನ ಮಾತನ್ನ ಯಾರು ಕೇಳ್ತಾರೆ ಕೇಳಿದೆ. ಶಂಕ್ರೂ ನೀನೀಗ ಬದಲಾಗಿದ್ದೀಯಾ. ನೀನು ಹಳ್ಳಿಗೆ ಹೋಗು. ತಾಳ್ಮೆಯಿಂದ ಕೆಲಸ ಮಾಡು. ಜಯ ಸಿಗುತ್ತೆ. ವಿಶ್ವಾಸ ತುಂಬಿ ಕಳಿಸಿದ.
ಮೊದಮೊದಲು ಅಂಗುಲಿಮಾಲನಿಗೆ ಆದ ಅನುಭವವೇ ನನಗೂ ಆಯಿತು. ದೆವ್ವದ ಬಾಯಲ್ಲಿ ವೇದ ಬರುವಂತೆ ನಿನ್ನ ಬಾಯಲ್ಲಿ ಸ್ವಾತಂತ್ರ್ಯದ ಮಾತು ಎಂದು ವ್ಯಂಗ್ಯವಾಡಿದರು, ಬೈದರು, ಹೊಡೆದರು. ಆದರೆ ನಾನು ಹೆದರಲಿಲ್ಲ, ಹಿಂಜರಿಯಲಿಲ್ಲ. ಅಣ್ಣನ ಮಾತಿನಂತೆ ನಡೆದುಕೊಂಡೆ.
ಕ್ರಮೇಣ ಜನ ನಾನು ಬದಲಾಗಿದ್ದನ್ನು ಗುರುತಿಸಿದರು. ನನ್ನ ಮಾತುಗಳನ್ನು ಕೇಳಲಾರಂಭಿಸಿದರು. ಮೆಚ್ಚಿಕೊಂಡಿದ್ದೇ ಅಲ್ಲದೆ ನಾಯಕನ ಸ್ಥಾನವನ್ನೂ ಕೊಟ್ಟರು. ಅವತ್ತಿನಿಂದ ಇವತ್ತಿನವರೆಗೂ ಹಳ್ಳಿಯ ಜನರಿಗೆ ನನ್ನ ಕೈಲಾದದ್ದನ್ನು ಮಾಡುತ್ತಲೇ ಬಂದಿದ್ದೇನೆ.
ಕಥೆ ಮುಗಿಯಿತೆಂಬಂತೆ ಮಾತನ್ನು ನಿಲ್ಲಿಸಿದರು. ಆದರೂ ತಾತ ಇನ್ನೂ ಈ ಲೋಕಕ್ಕೆ ಬಂದಿರಲಿಲ್ಲ. ತಾತ ಹೇಳಿದ್ದನ್ನು ನನ್ನಗಿನ್ನೂ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲಾಗಿರಲಿಲ್ಲ. ಅಬ್ಬಾ, ಎಂಥಾ ವ್ಯಕ್ತಿತ್ವ ತಾತ ನಿಂದುಎನ್ನುತ್ತಾ ತಾತ ಈಗ ಆ ಅಣ್ಣ ಎಲ್ಲಿದ್ದಾರೆ?” ಕೇಳಿದೆ.
ಅಣ್ಣ ಕಳೆದ ವರ್ಷವೇ ತೀರಿಕೊಂಡರು ಪುಟ್ಟಿ. ಕೊನೆ ಘಳಿಗೆಯವರೆಗೂ ಜನರೊಂದಿಗೆ ಅವರ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುತ್ತಾ ಕಾಲ ಕಳೆದರು. ಜನರ ಹೋರಾಟ ಕಟ್ಟುತ್ತಲೇ ಇದ್ದರು. ಆ ದಿವ್ಯ ಚೇತನದ ಮುಂದೆ ನಾವೆಷ್ಟು?”

ತಾತನದೇ ಭವ್ಯ ವ್ಯಕ್ತಿತ್ವ ಎಂದುಕೊಂಡ ನಾನು ಆ ವ್ಯಕ್ತಿಯ ಅತ್ಯದ್ಭುತ ವ್ಯಕ್ತಿತ್ವವನ್ನು ಅಳೆಯದಾದೆ!!
(based on true story)