Thursday, 18 June 2015
POEM 65 - ನೆನಪುಗಳು
ನೆನಪುಗಳು
ಕಾಡುತ್ತವೇಕೆ ನೆನಪುಗಳು
ದಿನನಿತ್ಯವೂ ನಮ್ಮ?
ಬಾಳಿನ ಜಂಜಡಗಳ ನಡುವೆ
ಮುತ್ತುತ್ತವೇಕೆ ಎಮ್ಮ?
ಕಾಡಿದರೆ ಕಾಡಲಿ ಬಿಡಿ ಎಂದು
ಪಕ್ಕಕ್ಕೆ ಸರಿಸಲಾಗುತ್ತಿಲ್ಲವೇಕೆ?
ನೆನಪುಗಳಿರಬೇಕು,
ಅವಿಲ್ಲದೆ ಬದುಕಿಲ್ಲ.
ಬೇರಿಲ್ಲದೆ ಮರವಿರಲು ಸಾಧ್ಯವೇ?
ಕಹಿ ನೆನಪುಗಳ ಮರೆಯಬೇಕು
ಸಿಹಿ ನೆನಪ ಜತನವಾಗಿಡಬೇಕು.
ಮರೆಯಲಾರೆವು ನಿಜ
ನಡೆದ ಘಟನೆಗಳ,
ಮರೆಯಲಾರೆವೇ ಅದರ
ಜೊತೆಗಿನ ನೋವುಗಳ?
ಕಲಿಸುತ್ತದೆ ಪಾಠವ
ಕಹಿ ಅನುಭವವು
ತುಂಬುತ್ತದೆ ಉತ್ಸಾಹವ
ಸಿಹಿಯನುಭವವು.
ಕಾಡುತ್ತವೇಕೆ ನೆನಪುಗಳು
ದಿನನಿತ್ಯವೂ ನಮ್ಮ?
ಬಾಳಿನ ಜಂಜಡಗಳ ನಡುವೆ
ಮುತ್ತುತ್ತವೇಕೆ ಎಮ್ಮ?
ಕಾಡಿದರೆ ಕಾಡಲಿ ಬಿಡಿ ಎಂದು
ಪಕ್ಕಕ್ಕೆ ಸರಿಸಲಾಗುತ್ತಿಲ್ಲವೇಕೆ?
ನೆನಪುಗಳಿರಬೇಕು,
ಅವಿಲ್ಲದೆ ಬದುಕಿಲ್ಲ.
ಬೇರಿಲ್ಲದೆ ಮರವಿರಲು ಸಾಧ್ಯವೇ?
ಕಹಿ ನೆನಪುಗಳ ಮರೆಯಬೇಕು
ಸಿಹಿ ನೆನಪ ಜತನವಾಗಿಡಬೇಕು.
ಮರೆಯಲಾರೆವು ನಿಜ
ನಡೆದ ಘಟನೆಗಳ,
ಮರೆಯಲಾರೆವೇ ಅದರ
ಜೊತೆಗಿನ ನೋವುಗಳ?
ಕಲಿಸುತ್ತದೆ ಪಾಠವ
ಕಹಿ ಅನುಭವವು
ತುಂಬುತ್ತದೆ ಉತ್ಸಾಹವ
ಸಿಹಿಯನುಭವವು.
POEM 64 - ಮಾತೃಮೂರ್ತಿಗೆ ನಮನಗಳು
ಮಾತೃಮೂರ್ತಿಗೆ ನಮನಗಳು
ಹೊತ್ತು ನಮ್ಮ, ನವಮಾಸಗಳು
ನಡೆದ ನಮ್ಮ ತಾಯಿಯ
ನವದಿನವಾದರೂ ಕೈಹಿಡಿದು
ನಡೆಸಲಾರೆವೆ ನಾವುಗಳು?
ಕೊಟ್ಟು ತನ್ನ ರಕ್ತಮಾಂಸಗಳು
ನಮ್ಮ ಬೆಳೆಸಿದ ಅಮ್ಮನ
ಕೆಲಕಾಲವಾದರೂ ಹಿತವಾಗಿ
ನೋಡಲಾರೆವೆ ನಾವುಗಳು?
ಸಹಿಸಿ ನೂರು ನೋವುಗಳು
ಜನ್ಮ ಕೊಟ್ಟ ಜನನಿಯ
ಹಲಕಾಲವಾದರೂ ಜತನವಾಗಿ
ಕಾಪಾಡಲಾರೆವೆ ನಾವುಗಳು?
ಮಾಡಿ ಎಲ್ಲ ತ್ಯಾಗಗಳು
ಓದಲು ಬೆನ್ತಟ್ಟಿದ ಮಾತೆಗೆ
ಕೂತು ಕಥೆಯೊಂದನು
ಓದಲಾರೆವೆ ನಾವುಗಳು?
ಸಹಿಸಿ ನೂರು ಹಸಿವುಗಳು
ನಮಗುಣಬಡಿಸಿದ ಅವ್ವನಿಗೆ
ತುತ್ತು ಅನ್ನವನ್ನಾದರೂ
ನೀಡಲಾರೆವೆ ನಾವುಗಳು?
ಎಷ್ಟೋ ಹಗಲುರಾತ್ರಿಗಳು
ನಿದ್ದೆಗೆಟ್ಟು ಸೇವೆಗೈದ ತಾಯಿಯ
ಸೇವೆಯನು ಕಿಂಚಿತ್ತಾದರೂ
ಮಾಡಲಾರೆವೆ ನಾವುಗಳು?
ನಮ್ಮ ಬಾಳಲಿ ತುಂಬಿ ನಗೆಗಳು
ನೋವನೆಲ್ಲ ನುಂಗುವ ಅಮ್ಮನ
ಬದುಕನ್ನು ಸುಗಮಗೊಳಿಸುವ
ಪಣ ತೊಡಲಾರೆವೆ ನಾವುಗಳು?
ಹೊತ್ತು ನಮ್ಮ, ನವಮಾಸಗಳು
ನಡೆದ ನಮ್ಮ ತಾಯಿಯ
ನವದಿನವಾದರೂ ಕೈಹಿಡಿದು
ನಡೆಸಲಾರೆವೆ ನಾವುಗಳು?
ಕೊಟ್ಟು ತನ್ನ ರಕ್ತಮಾಂಸಗಳು
ನಮ್ಮ ಬೆಳೆಸಿದ ಅಮ್ಮನ
ಕೆಲಕಾಲವಾದರೂ ಹಿತವಾಗಿ
ನೋಡಲಾರೆವೆ ನಾವುಗಳು?
ಸಹಿಸಿ ನೂರು ನೋವುಗಳು
ಜನ್ಮ ಕೊಟ್ಟ ಜನನಿಯ
ಹಲಕಾಲವಾದರೂ ಜತನವಾಗಿ
ಕಾಪಾಡಲಾರೆವೆ ನಾವುಗಳು?
ಮಾಡಿ ಎಲ್ಲ ತ್ಯಾಗಗಳು
ಓದಲು ಬೆನ್ತಟ್ಟಿದ ಮಾತೆಗೆ
ಕೂತು ಕಥೆಯೊಂದನು
ಓದಲಾರೆವೆ ನಾವುಗಳು?
ಸಹಿಸಿ ನೂರು ಹಸಿವುಗಳು
ನಮಗುಣಬಡಿಸಿದ ಅವ್ವನಿಗೆ
ತುತ್ತು ಅನ್ನವನ್ನಾದರೂ
ನೀಡಲಾರೆವೆ ನಾವುಗಳು?
ಎಷ್ಟೋ ಹಗಲುರಾತ್ರಿಗಳು
ನಿದ್ದೆಗೆಟ್ಟು ಸೇವೆಗೈದ ತಾಯಿಯ
ಸೇವೆಯನು ಕಿಂಚಿತ್ತಾದರೂ
ಮಾಡಲಾರೆವೆ ನಾವುಗಳು?
ನಮ್ಮ ಬಾಳಲಿ ತುಂಬಿ ನಗೆಗಳು
ನೋವನೆಲ್ಲ ನುಂಗುವ ಅಮ್ಮನ
ಬದುಕನ್ನು ಸುಗಮಗೊಳಿಸುವ
ಪಣ ತೊಡಲಾರೆವೆ ನಾವುಗಳು?
POEM 63 - ಒಗ್ಗಟ್ಟಿನಲ್ಲಿ ಬಲವಿದೆ
ಒಗ್ಗಟ್ಟಿನಲ್ಲಿ ಬಲವಿದೆ
"ಒಗ್ಗಟ್ಟಿನಲ್ಲಿ ಬಲವಿದೆ"
ಕೇಳುತ್ತಲೇ ಬಂದಿದ್ದೆ
ಈ ಮಾತ, ಚಿಕ್ಕಂದಿನಿಂದ.
ಮನವರಕೆಯಾದದ್ದು
ನೆನ್ನೆ ಸಂಜೆಯಷ್ಟೇ,
ಕಂಡಾಗ ಕಾಲೇಜಿನ ಆವರಣದ
ದೈತ್ಯ ಮರ ಉರುಳಿದಾಗ ಧರೆಗೆ.
ಸುರಿದ ಧಾರಾಕಾರ ಮಳೆ
ಕುಂಟು ನೆಪವಾಯಿತಷ್ಟೇ.
ಉರುಳಿಸಿದ್ದು ನಿಜವಾಗಲೂ
ಮರಕ್ಕತ್ತಿದ ಗೆದ್ದಲು.
ನೋಡಲವು ಸಣ್ಣ ಕೀಟಗಳು
ಲೆಕ್ಕಕ್ಕೇ ಬಾರದವು!
ಆದರವು ಗುಂಪುಗೂಡಿದಾಗ
ಒಟ್ಟಿಗೆ ರಾಶಿಗಟ್ಟಲೆಯಾದಾಗ
ಹೆಮ್ಮರವ ಉರುಳಿಸಿದವು
ಸುನಾಯಾಸವಾಗಿ ಧರೆಗೆ.
ಒಂದು ದಿನದ ಸಾಧನೆಯಲ್ಲ
ಹಲವು ವರುಷಗಳಿರಬಹುದು,
ಛಲ ಬಿಡದ ತ್ರಿವಿಕ್ರಮರವರು
ಸಾಧಿಸಿ ತೋರಿಸಿಕೊಟ್ಟರು.
ಮತ್ತೇಕೆ ನಾವು ನಮ್ಮನ್ನೇ
ಅಸಹಾಯಕರೆಂದುಕೊಳುತ್ತೇವೆ?
ಒಬ್ಬಂಟಿಯಾಗಿ ಸಾಧಿಸಲಾರೆವೇನೋ,
ಆದರೆ, ಜಂಟಿಯಾಗಿ?
"ಒಗ್ಗಟ್ಟಿನಲ್ಲಿ ಬಲವಿದೆ"
ಕೇಳುತ್ತಲೇ ಬಂದಿದ್ದೆ
ಈ ಮಾತ, ಚಿಕ್ಕಂದಿನಿಂದ.
ಮನವರಕೆಯಾದದ್ದು
ನೆನ್ನೆ ಸಂಜೆಯಷ್ಟೇ,
ಕಂಡಾಗ ಕಾಲೇಜಿನ ಆವರಣದ
ದೈತ್ಯ ಮರ ಉರುಳಿದಾಗ ಧರೆಗೆ.
ಸುರಿದ ಧಾರಾಕಾರ ಮಳೆ
ಕುಂಟು ನೆಪವಾಯಿತಷ್ಟೇ.
ಉರುಳಿಸಿದ್ದು ನಿಜವಾಗಲೂ
ಮರಕ್ಕತ್ತಿದ ಗೆದ್ದಲು.
ನೋಡಲವು ಸಣ್ಣ ಕೀಟಗಳು
ಲೆಕ್ಕಕ್ಕೇ ಬಾರದವು!
ಆದರವು ಗುಂಪುಗೂಡಿದಾಗ
ಒಟ್ಟಿಗೆ ರಾಶಿಗಟ್ಟಲೆಯಾದಾಗ
ಹೆಮ್ಮರವ ಉರುಳಿಸಿದವು
ಸುನಾಯಾಸವಾಗಿ ಧರೆಗೆ.
ಒಂದು ದಿನದ ಸಾಧನೆಯಲ್ಲ
ಹಲವು ವರುಷಗಳಿರಬಹುದು,
ಛಲ ಬಿಡದ ತ್ರಿವಿಕ್ರಮರವರು
ಸಾಧಿಸಿ ತೋರಿಸಿಕೊಟ್ಟರು.
ಮತ್ತೇಕೆ ನಾವು ನಮ್ಮನ್ನೇ
ಅಸಹಾಯಕರೆಂದುಕೊಳುತ್ತೇವೆ?
ಒಬ್ಬಂಟಿಯಾಗಿ ಸಾಧಿಸಲಾರೆವೇನೋ,
ಆದರೆ, ಜಂಟಿಯಾಗಿ?
POEM 62 - ಬದುಕಿನ ತಿರುವುಗಳು
ಬದುಕಿನ ತಿರುವುಗಳು
ಹದಿಮೂರು ವರ್ಷ ನನಗಾಗ,
ಎಳೆ ಬಾಲೆಯು ನಾನಾಗ?
ಕಳಿಸಿದರು ನನ್ನನ್ನು
ಕೊಟ್ಟು ಹೊಸ ಬದುಕನ್ನು
ಗೊತ್ತಿಲ್ಲದ ಪ್ರಪಂಚಕ್ಕೆ
ಅಪರಿಚಿತ ವ್ಯಕ್ತಿಯೊಂದಿಗೆ
ಮದುವೆ ಎಂದರೇನು
ತಿಳಿದಿತ್ತೇನು ನನಗೆ?
ಮನೆ ಹೊಕ್ಕಾಗ ತಿಳಿಯಿತು
ಎರಡನೆಯವಳು ನಾನೆಂದು.
ಹೇಳಿದರೆ ಅಪ್ಪಾಮ್ಮನಿಗೆ,
ಬೋಧಿಸಿದರು ನನಗೆ -
ಯಾರೂ ಆಗಿಲ್ಲವೇ,
ಎರಡನೇ ಮದುವೆ?
ಹೇಗೊ ಹೊಂದಿಕೊ
ಪತಿ ಪರಮೇಶ್ವರ ಅರಿತುಕೊ.
ಯತ್ನಿಸಿದೆ ಹಾಗೇ ಇರಲು
ಹೊಂದಿಕೊಂಡು ಬಾಳಲು.
ವಿವರಿಸಲಿ ಹೇಗೆ
ನಾ ಪಟ್ಟ ಪಾಡ
ಅದು ನನ್ನ ವೈರಿಗೂ ಬೇಡ.
ಗಂಡನ ಹಿಂಸೆಯೊಂದು ಕಡೆ
ತೌರಿನ ತಾತ್ಸಾರ ಮತ್ತೊಂದೆಡೆ
ಈ ರೀತಿ ಬದುಕುವ ಬದಲು
ಹೊರಟೆ ಸಾವಿಗೆ ಶರಣಾಗಲು.
ರೈಲು ಕಂಬಿಯ ಮೇಲೆ
ಮಲಗಬೇಕೆಂದುಕೊಂಡಾಗಲೇ
ಬದುಕಿನ ಆಸೆ ಕರೆದಿತ್ತು
ದೇಹ ರೈಲನ್ನು ಹತ್ತಿತ್ತು.
ಕಾಸಿಲ್ಲದೆ ಕೈಯಲ್ಲಿ
ಕನಸಿರದೆ ಬಾಳಿನಲಿ
ಹಸಿದ ಹೊಟ್ಟೆಯಲಿ
ಮಾಸಿದ ಬಟ್ಟೆಯಲಿ
ತಲುಪಿದ್ದೆ ಗೊತ್ತಿಲ್ಲದೂರಿಗೆ
ಅಪರಿಚಿತರ ನಾಡಿಗೆ.
ಅವರಿವರ ಕಾಡಿಬೇಡುತ್ತಲೇ
ಹೊಟ್ಟೆ ತುಂಬಿಸುವಾಗಲೇ
ಬಂತೊಂದು ಜೋಡಿ
ಬೆಣ್ಣೆಮಾತಗಳಾಡಿ
ನನ್ನ ಮರುಳುಮಾಡಿ
ಒಯ್ದರು ತಮ್ಮ ಮನೆಗೆ
ಕಾದಿತ್ತಲ್ಲಿ ನರಕ ನನಗೆ
ಬಿದ್ದಿದ್ದೆ ನಾ ಖಚಿತವಾಗಿ
ಬೆಂಕಿಯಿಂದ ಬಾಣಲೆಗೆ.
ಬಿಟ್ಟಿ ಚಾಕರಿ ಮಾಡುತ್ತಾ
ತಂಗಳನ್ನವ ತಿನ್ನುತ್ತಾ
ಹೊಡೆತ, ಬಡೆತ,
ಅವಮಾನಕ್ಕೆ ಒಳಗಾಗುತ್ತಾ
ಇರಲಾರದೆ ಆ ನರಕದಲ್ಲಿ
ಮತ್ತೆ ನಿಂತೆ ಬೀದಿಯಲ್ಲಿ
ಹೋಗುವುದು ಎಲ್ಲಿ
ಪ್ರಶ್ನೆ ಮೂಡಿತು ಮನದಲ್ಲಿ.
ನಿಂತು ರೈಲು ನಿಲ್ದಾಣದಲ್ಲಿ
ಚಿಂತಿಸುತ್ತಿರುವಾಗ ಅಲ್ಲಿ
ಕಂಡರೋರ್ವ ಸಂತರು
ಹೊಸ ಬದುಕನ್ನು ಕೊಟ್ಟರು.
ದುಡಿವ ಕೈಗೆ ಕೊಟ್ಟು ಕೆಲಸ
ನೊಂದ ಮನಕೆ ನೀಡಿ ಹರುಷ
ಉತ್ಸಾಹವ ತುಂಬಿದರು
ದಾರಿದೀಪವಾದರು.
ಬೆಳೆದೆ ನಾನು ಅಲ್ಲಿಂದ
ಬಾಳುತಿರುವೆ ಘನತೆಯಿಂದ
ನನ್ನಂತೆ ನೊಂದವರ
ಬಾಳಿನಲಿ ಬೆಂದವರ
ಕಂಬನಿಯ ಒರೆಸಲು
ಶ್ರಮಿಸುತಿರುವೆ ನಿತ್ಯವು.
ಹದಿಮೂರು ವರ್ಷ ನನಗಾಗ,
ಎಳೆ ಬಾಲೆಯು ನಾನಾಗ?
ಕಳಿಸಿದರು ನನ್ನನ್ನು
ಕೊಟ್ಟು ಹೊಸ ಬದುಕನ್ನು
ಗೊತ್ತಿಲ್ಲದ ಪ್ರಪಂಚಕ್ಕೆ
ಅಪರಿಚಿತ ವ್ಯಕ್ತಿಯೊಂದಿಗೆ
ಮದುವೆ ಎಂದರೇನು
ತಿಳಿದಿತ್ತೇನು ನನಗೆ?
ಮನೆ ಹೊಕ್ಕಾಗ ತಿಳಿಯಿತು
ಎರಡನೆಯವಳು ನಾನೆಂದು.
ಹೇಳಿದರೆ ಅಪ್ಪಾಮ್ಮನಿಗೆ,
ಬೋಧಿಸಿದರು ನನಗೆ -
ಯಾರೂ ಆಗಿಲ್ಲವೇ,
ಎರಡನೇ ಮದುವೆ?
ಹೇಗೊ ಹೊಂದಿಕೊ
ಪತಿ ಪರಮೇಶ್ವರ ಅರಿತುಕೊ.
ಯತ್ನಿಸಿದೆ ಹಾಗೇ ಇರಲು
ಹೊಂದಿಕೊಂಡು ಬಾಳಲು.
ವಿವರಿಸಲಿ ಹೇಗೆ
ನಾ ಪಟ್ಟ ಪಾಡ
ಅದು ನನ್ನ ವೈರಿಗೂ ಬೇಡ.
ಗಂಡನ ಹಿಂಸೆಯೊಂದು ಕಡೆ
ತೌರಿನ ತಾತ್ಸಾರ ಮತ್ತೊಂದೆಡೆ
ಈ ರೀತಿ ಬದುಕುವ ಬದಲು
ಹೊರಟೆ ಸಾವಿಗೆ ಶರಣಾಗಲು.
ರೈಲು ಕಂಬಿಯ ಮೇಲೆ
ಮಲಗಬೇಕೆಂದುಕೊಂಡಾಗಲೇ
ಬದುಕಿನ ಆಸೆ ಕರೆದಿತ್ತು
ದೇಹ ರೈಲನ್ನು ಹತ್ತಿತ್ತು.
ಕಾಸಿಲ್ಲದೆ ಕೈಯಲ್ಲಿ
ಕನಸಿರದೆ ಬಾಳಿನಲಿ
ಹಸಿದ ಹೊಟ್ಟೆಯಲಿ
ಮಾಸಿದ ಬಟ್ಟೆಯಲಿ
ತಲುಪಿದ್ದೆ ಗೊತ್ತಿಲ್ಲದೂರಿಗೆ
ಅಪರಿಚಿತರ ನಾಡಿಗೆ.
ಅವರಿವರ ಕಾಡಿಬೇಡುತ್ತಲೇ
ಹೊಟ್ಟೆ ತುಂಬಿಸುವಾಗಲೇ
ಬಂತೊಂದು ಜೋಡಿ
ಬೆಣ್ಣೆಮಾತಗಳಾಡಿ
ನನ್ನ ಮರುಳುಮಾಡಿ
ಒಯ್ದರು ತಮ್ಮ ಮನೆಗೆ
ಕಾದಿತ್ತಲ್ಲಿ ನರಕ ನನಗೆ
ಬಿದ್ದಿದ್ದೆ ನಾ ಖಚಿತವಾಗಿ
ಬೆಂಕಿಯಿಂದ ಬಾಣಲೆಗೆ.
ಬಿಟ್ಟಿ ಚಾಕರಿ ಮಾಡುತ್ತಾ
ತಂಗಳನ್ನವ ತಿನ್ನುತ್ತಾ
ಹೊಡೆತ, ಬಡೆತ,
ಅವಮಾನಕ್ಕೆ ಒಳಗಾಗುತ್ತಾ
ಇರಲಾರದೆ ಆ ನರಕದಲ್ಲಿ
ಮತ್ತೆ ನಿಂತೆ ಬೀದಿಯಲ್ಲಿ
ಹೋಗುವುದು ಎಲ್ಲಿ
ಪ್ರಶ್ನೆ ಮೂಡಿತು ಮನದಲ್ಲಿ.
ನಿಂತು ರೈಲು ನಿಲ್ದಾಣದಲ್ಲಿ
ಚಿಂತಿಸುತ್ತಿರುವಾಗ ಅಲ್ಲಿ
ಕಂಡರೋರ್ವ ಸಂತರು
ಹೊಸ ಬದುಕನ್ನು ಕೊಟ್ಟರು.
ದುಡಿವ ಕೈಗೆ ಕೊಟ್ಟು ಕೆಲಸ
ನೊಂದ ಮನಕೆ ನೀಡಿ ಹರುಷ
ಉತ್ಸಾಹವ ತುಂಬಿದರು
ದಾರಿದೀಪವಾದರು.
ಬೆಳೆದೆ ನಾನು ಅಲ್ಲಿಂದ
ಬಾಳುತಿರುವೆ ಘನತೆಯಿಂದ
ನನ್ನಂತೆ ನೊಂದವರ
ಬಾಳಿನಲಿ ಬೆಂದವರ
ಕಂಬನಿಯ ಒರೆಸಲು
ಶ್ರಮಿಸುತಿರುವೆ ನಿತ್ಯವು.
POEM 61 - ಗೆಳೆತನ
ಗೆಳೆತನ
ಕಷ್ಟಸುಖಗಳ ಹಂಚಿಕೊಂಡೆ
ಬೆಳೆಯಿತವರಲಿ ಗೆಳೆತನ
ಜನರಿಗಚ್ಚರಿ ಅದನು ಕಂಡೆ
ಸ್ವಭಾವದಲ್ಲಿತ್ತು ಭಿನ್ನತನ
ಹುಟ್ಟಿದೆಲ್ಲೊ, ಬೆಳೆದುದೆಲ್ಲೊ
ಬಂದರವರು ಇಲ್ಲಿಗೆ
ಯಾರೋ ಏನೊ ಅರಿಯದು
ಸ್ನೇಹವಾಯ್ತು ಮೆಲ್ಲಗೆ
ಬೆಳೆಯಿತದು ದಿನವುದಿನವು
ಕೊಂಚಕೊಂಚವಾಗಿಯೇ
ದಿನವು ಹರಟೆ, ದಿನವು ನಗುವು
ಕಾಲ ಕಳೆಯಿತು ಹೀಗೆಯೇ
ಮುನಿಸು ಇತ್ತು ಜಗಳವಿತ್ತು
ಬರುತಲಿತ್ತು ತಪ್ಪರ್ಥವು
ಸ್ನೇಹ ಇತ್ತು ವಿಶ್ವಾಸವಿತ್ತು
ಮರೆಯಾಗುತಿತ್ತು ಎಲ್ಲವು
ಏಕೋ ಏನೋ ಒಂದಿನ
ಬಂದಿತೇನೊ ಅಪಾರ್ಥವು
ಜೋರು ಮಾತು ಆದಿನ
ಮರೆಯಾಯಿತಲ್ಲಿ ಸ್ನೇಹವು
ನಗುವು ಇಲ್ಲ ಖುಷಿಯು ಇಲ್ಲ
ಕವಿದಿದೆ ಬರಿ ಮೌನವು
ನಲಿವು ಇಲ್ಲ ಗೆಲುವು ಇಲ್ಲ
ಬದುಕಲ್ಹೇಗೆ ಸಾಧ್ಯವು ?
ಬಂಧಿಯಾಗೆ ನಾವುಗಳೆಲ್ಲ
ನಮ್ಮ ಅಹಂನ ಕೋಟೆಯಲಿ
ಕತ್ತಲಾಗದೆ ಬದುಕೆಲ್ಲ
ಬೆಳಕಿರುವುದೆ ಈ ಬಾಳಿನಲಿ?
ನಮ್ಮವರೆಂದು ಭಾವಿಸಿ ಅವರ
ಕ್ಷಮಿಸಬಾರದೆ ಒಂದೊಮ್ಮೆ
ಬಿಟ್ಟು ಅಹಂ, ನಾವವರ
ಮಾತಾಡಬಾರದೇ ಈಗೊಮ್ಮೆ?
ಮಾತಾನಾಡಿದರೆ ಮನಬಿಚ್ಚಿ
ಮರೆಯಾಗವೆ ಮನಸ್ತಾಪಗಳು?
ಚರ್ಚಿಸಿದರೆ ಸಿಹಿ ಲೇಪವ ಹಚ್ಚಿ
ಮೂಡದೆ ಮತ್ತೆ ಹೊಸ ಹಗಲು!
POEM 60 - ಸ್ಬಚ್ಛತೆ
ಸ್ಬಚ್ಛತೆ
ಮನೆಯ ಮೂಲೆಗಳ
ಒಂದಿಂಚೂ ಬಿಡದೆ
ಗುಡಿಸಿ ಕಸವ ಹೊರಹಾಕುವ ನಾವು
ಮನದ ಕಸವ
ಸ್ವಚ್ಛಗೊಳಿಸದೆ
ಭದ್ರವಾಗಿಟ್ಟುಕೊಳ್ಳುತ್ತೇವೇಕೆ?
ಪಾತ್ರೆ ಕರೆ ಕಟ್ಟಿದಾಗ
ಹರಸಾಹಸ ಮಾಡಿ
ತಿಕ್ಕಿ ತೀಡಿ ಹೋಗಲಾಡಿಸುವ ನಾವು
ಮನದ ಕರೆಗಳ
ಉಜ್ಜಿ ತೆಗೆಯದೆ
ಜಡ್ಡುಗಟ್ಟಲು ಬಿಡುತ್ತೇವೇಕೆ?
ಬಟ್ಟೆಯ ಕೊಳೆ ತೆಗೆದು
ಹೊಳೆವಂತೆ ಮಾಡಲು
ಭಿನ್ನ ಸೋಪುಗಳ ಬಳಸುವ ನಾವು
ಮನದ ಕೊಳೆಗಳ
ತೊಳೆದುಕೊಳ್ಳದೆ
ಹಾಗೆಯೇ ಉಳಿಸಿಕೊಳ್ಳುತ್ತೇವೇಕೆ?
ತಲೆತೊಳೆದು ಮೈ ಉಜ್ಜಿ
ದಿನವೂ ದೇಹವ
ಶುದ್ಧೀಕರಿಸುವ ನಾವು
ಮನದ ಕಲ್ಮಶಗಳ
ಕಳೆದುಕೊಳ್ಳದೆ
ಜೋಪಾನವಾಗಿಟ್ಟುಕೊಳ್ಳುತ್ತೇವೇಕೆ?
ಮನೆಯ ಮೂಲೆಗಳ
ಒಂದಿಂಚೂ ಬಿಡದೆ
ಗುಡಿಸಿ ಕಸವ ಹೊರಹಾಕುವ ನಾವು
ಮನದ ಕಸವ
ಸ್ವಚ್ಛಗೊಳಿಸದೆ
ಭದ್ರವಾಗಿಟ್ಟುಕೊಳ್ಳುತ್ತೇವೇಕೆ?
ಪಾತ್ರೆ ಕರೆ ಕಟ್ಟಿದಾಗ
ಹರಸಾಹಸ ಮಾಡಿ
ತಿಕ್ಕಿ ತೀಡಿ ಹೋಗಲಾಡಿಸುವ ನಾವು
ಮನದ ಕರೆಗಳ
ಉಜ್ಜಿ ತೆಗೆಯದೆ
ಜಡ್ಡುಗಟ್ಟಲು ಬಿಡುತ್ತೇವೇಕೆ?
ಬಟ್ಟೆಯ ಕೊಳೆ ತೆಗೆದು
ಹೊಳೆವಂತೆ ಮಾಡಲು
ಭಿನ್ನ ಸೋಪುಗಳ ಬಳಸುವ ನಾವು
ಮನದ ಕೊಳೆಗಳ
ತೊಳೆದುಕೊಳ್ಳದೆ
ಹಾಗೆಯೇ ಉಳಿಸಿಕೊಳ್ಳುತ್ತೇವೇಕೆ?
ತಲೆತೊಳೆದು ಮೈ ಉಜ್ಜಿ
ದಿನವೂ ದೇಹವ
ಶುದ್ಧೀಕರಿಸುವ ನಾವು
ಮನದ ಕಲ್ಮಶಗಳ
ಕಳೆದುಕೊಳ್ಳದೆ
ಜೋಪಾನವಾಗಿಟ್ಟುಕೊಳ್ಳುತ್ತೇವೇಕೆ?
POEM 59 - ಮಾನವ ಹಕ್ಕು?
(ಸಂದರ್ಭ - ಇಂಡೊನೇಷ್ಯಾದಲ್ಲಿ ಮಾದಕದ್ರವ್ಯ ಜಾಲದ ಆರೋಪಿಗಳಿಗೆ ಗಲ್ಲುಶಿಕ್ಷೆ ಘೋಷಣೆಯಾದಾಗ)
ಮಾನವ ಹಕ್ಕು?
ಜೇಡ ಸುಂದರ ಬಲೆ ನೇಯ್ದು
ಬಲಿಯ ಆಕರ್ಷಿಸುವಂತೆ
ಡ್ರಗ್ಸ್ ಮಾಯಾಜಾಲದಲಿ
ಬರಸೆಳೆದಪ್ಪಿ ಜನರ
ನೂಕಿ ಮೃತ್ಯುಕೂಪದಲಿ
ಆ ಅಮಾಯಕರ
ಯುವಕರ ಬದುಕನ್ನು
ನರಕಮಯಗೊಳಿಸಿ
ಬಡಮಕ್ಕಳನು ಈ
ಅಸಹ್ಯ ದಂಧೆಗಿಳಿಸಿ
ಜನರ ಲೂಟಿ ಹೊಡೆದ
ನಾಲ್ವರು ನರಹಂತಕರಿಗೆ
ನೀಡಲಾಗಿದೆ ಗಲ್ಲುಶಿಕ್ಷೆ
ನ್ಯಾಯಾಲಯದಲ್ಲಿ ಕೊನೆಗೂ.
ನೆಮ್ಮದಿಯ ನಿಟ್ಟುಸಿರಿಟ್ಟು
ನ್ಯಾಯಕ್ಕೆ ಗೆಲುವಾಯಿತೆಂದು
ಖುಷಿ ಪಡುವ ಸಮಯದಲಿ
ಕೇಳಿಬರುತ್ತಿದೆ ದನಿಯೊಂದು
ಈ ನರಹಂತಕರಿಗೆ
ಜೀವದಾನ ಮಾಡಿರೆಂದು,
ಜೀವ ತೆಗೆಯುವ ಹಕ್ಕು
ನಮಗಿಲ್ಲವೆಂದು
ಇದು ಮಾನವ ಹಕ್ಕುಗಳ
ಉಲ್ಲಂಘನೆಯೆಂದು
ಬೊಬ್ಬಿಡುತ್ತಿದ್ದಾರೆ
ಗೋಗರೆಯುತ್ತಿದ್ದಾರೆ
ಮಾನವ ಹಕ್ಕುಗಳ ರಕ್ಷಕರೆಂದು
ಹಣೆಪಟ್ಟಿ ತೊಟ್ಟವರು ಇಂದು.
ನಿಜಕ್ಕೂ ಇದು
ಹಕ್ಕುಗಳ ಉಲ್ಲಂಘನೆಯೇ?
ಜೀವದಾನ ಮಾಡುವುದು
ನ್ಯಾಯಸಮ್ಮತವೇ?
ತಮ್ಮಯ ದುರಾಸೆಗಾಗಿ
ದೇಶವಿದೇಶಗಳಲ್ಲಿ
ಮುಗ್ಧ ಮಕ್ಕಳ
ಮಾರಣಹೋಮಗೈದ
ಸದೃಢ ಯುವಕರ
ಬಲಿತೆಗೆದುಕೊಂಡ
ಅಸಂಖ್ಯಾತ ಕುಟುಂಬಗಳು
ದಿನನಿತ್ಯ ಕಣ್ಣೀರಲಿ
ಕೈತೊಳೆವಂತೆ ಮಾಡಿದ
ಖೂಳರನು ರಕ್ಷಿಸುವುದು
ತರವೇ? ಸರಿಯೇ?
ಸಾವಿರಾರು ಜೀವಗಳ ತೆಗೆದ ಹಂತಕರಿಗೆ
ಜೀವದಾನ ಪಡೆಯುವ ಹಕ್ಕಿದೆಯೆ?!
ಮಾನವ ಹಕ್ಕು?
ಜೇಡ ಸುಂದರ ಬಲೆ ನೇಯ್ದು
ಬಲಿಯ ಆಕರ್ಷಿಸುವಂತೆ
ಡ್ರಗ್ಸ್ ಮಾಯಾಜಾಲದಲಿ
ಬರಸೆಳೆದಪ್ಪಿ ಜನರ
ನೂಕಿ ಮೃತ್ಯುಕೂಪದಲಿ
ಆ ಅಮಾಯಕರ
ಯುವಕರ ಬದುಕನ್ನು
ನರಕಮಯಗೊಳಿಸಿ
ಬಡಮಕ್ಕಳನು ಈ
ಅಸಹ್ಯ ದಂಧೆಗಿಳಿಸಿ
ಜನರ ಲೂಟಿ ಹೊಡೆದ
ನಾಲ್ವರು ನರಹಂತಕರಿಗೆ
ನೀಡಲಾಗಿದೆ ಗಲ್ಲುಶಿಕ್ಷೆ
ನ್ಯಾಯಾಲಯದಲ್ಲಿ ಕೊನೆಗೂ.
ನೆಮ್ಮದಿಯ ನಿಟ್ಟುಸಿರಿಟ್ಟು
ನ್ಯಾಯಕ್ಕೆ ಗೆಲುವಾಯಿತೆಂದು
ಖುಷಿ ಪಡುವ ಸಮಯದಲಿ
ಕೇಳಿಬರುತ್ತಿದೆ ದನಿಯೊಂದು
ಈ ನರಹಂತಕರಿಗೆ
ಜೀವದಾನ ಮಾಡಿರೆಂದು,
ಜೀವ ತೆಗೆಯುವ ಹಕ್ಕು
ನಮಗಿಲ್ಲವೆಂದು
ಇದು ಮಾನವ ಹಕ್ಕುಗಳ
ಉಲ್ಲಂಘನೆಯೆಂದು
ಬೊಬ್ಬಿಡುತ್ತಿದ್ದಾರೆ
ಗೋಗರೆಯುತ್ತಿದ್ದಾರೆ
ಮಾನವ ಹಕ್ಕುಗಳ ರಕ್ಷಕರೆಂದು
ಹಣೆಪಟ್ಟಿ ತೊಟ್ಟವರು ಇಂದು.
ನಿಜಕ್ಕೂ ಇದು
ಹಕ್ಕುಗಳ ಉಲ್ಲಂಘನೆಯೇ?
ಜೀವದಾನ ಮಾಡುವುದು
ನ್ಯಾಯಸಮ್ಮತವೇ?
ತಮ್ಮಯ ದುರಾಸೆಗಾಗಿ
ದೇಶವಿದೇಶಗಳಲ್ಲಿ
ಮುಗ್ಧ ಮಕ್ಕಳ
ಮಾರಣಹೋಮಗೈದ
ಸದೃಢ ಯುವಕರ
ಬಲಿತೆಗೆದುಕೊಂಡ
ಅಸಂಖ್ಯಾತ ಕುಟುಂಬಗಳು
ದಿನನಿತ್ಯ ಕಣ್ಣೀರಲಿ
ಕೈತೊಳೆವಂತೆ ಮಾಡಿದ
ಖೂಳರನು ರಕ್ಷಿಸುವುದು
ತರವೇ? ಸರಿಯೇ?
ಸಾವಿರಾರು ಜೀವಗಳ ತೆಗೆದ ಹಂತಕರಿಗೆ
ಜೀವದಾನ ಪಡೆಯುವ ಹಕ್ಕಿದೆಯೆ?!
POEM 58 - ಇತಿಹಾಸದ ಚಕ್ರ
ಇತಿಹಾಸದ ಚಕ್ರ
ಇತಿಹಾಸದ ಚಕ್ರ
ತಿರುಗುತ್ತಿದೆ
ಇತಿಹಾಸ
ಮರುಕಳಿಸುತಿದೆ.
ಚಿಕ್ಕಂದಿನಲ್ಲಿ
ಅಮ್ಮ ಇದ್ದಾಗ
ಅಡಿಗೆಮನೆಯಲ್ಲಿ
ಸ್ವಲ್ಪ ಹೊತ್ತು
ಕೇಳುತ್ತಿದ್ದೆವು ನಾವಂದು,
ಎಷ್ಟೊತ್ತು ಬೇಕಮ್ಮ ಎಂದು.
ಇಂದು ನಾವಿಲ್ಲಿ
ಅಡಿಗೆಮನೆಯಲ್ಲಿದ್ದಾಗ
ಹೆಚ್ಚು ಹೊತ್ತು,
ಮಕ್ಕಳು ಕೇಳುವಾಗ
ಅನಿಸುತ್ತಿದೆ
ರಾಶಿ ಕೆಲಸಗಳು
ಮುಗಿಯುತ್ತಲೇ ಇಲ್ಲವೆಂದು!
ಚಿಕ್ಕವರಿದ್ದಾಗ ಅಮ್ಮ
ನಮ್ಮ ತುಂಟಾಟಕ್ಕೆ
ಬೇಸತ್ತು ಗದರಿದರೆ
ಈ ಅಮ್ಮನಿಗೆ ನಾವು
ಅರ್ಥವಾಗುವುದೇ ಇಲ್ಲವೇ
ಎಂದು ಗೊಣಗಿದ್ದುಂಟು.
ಈಗ ಒಂದೇ ಮಗು
ಸ್ವಲ್ಪ ಹೇಳಿದ ಮಾತು
ಕೇಳದೇ ಹೋದರೆ
ಇದರೊಂದಿಗೆ
ಹೆಣಗುವುದು ಸಾಧ್ಯವೇ?
ವಟಗುಟ್ಟುವುದುಂಟು.
ಬಾಲ್ಯದಲಿ ನಾವು
ಓದದೇ ಇದ್ದಾಗ
ಅಮ್ಮ ಬುದ್ಧಿ ಹೇಳಿದಾಗ
ಇವರ ವರಾತ
ಯಾವಾಗಲೂ ಇದ್ದದ್ದೇ
ಎಂದು ಕೋಪಿಸಿದ್ದುಂಟು.
ಈಗ ಮಕ್ಕಳು
ಒಂದೆರಡು ಅಂಕಗಳು
ಕಡಿಮೆ ಪಡೆದರೂ
ಬೈದುಹೊಡೆದು
ಆಕಾಶ ಭೂಮಿಗಳ
ಒಂದು ಮಾಡುವುದುಂಟು .
ಭಿನ್ನತೆ ಇರುವುದಿದರಲ್ಲಿ
ಅವರಿಗೆ ಬದುಕು
ಸಂತಸದಿ ಸ್ವೀಕರಿಸಿ
ಯಶಸ್ವಿಯಾಗಿ
ನಿಭಾಯಿಸಬಲ್ಲ
ಒಂದು ಜವಾಬ್ದಾರಿ.
ನಮಗಾದರೋ
ಅದೊಂದು
ಭಾರವಾದ
ನೀರಸವಾದ
ಅನಿವಾರ್ಯ ದಾರಿ.
ಇತಿಹಾಸದ ಚಕ್ರ
ತಿರುಗುತ್ತಿದೆ
ಇತಿಹಾಸ
ಮರುಕಳಿಸುತಿದೆ.
ಚಿಕ್ಕಂದಿನಲ್ಲಿ
ಅಮ್ಮ ಇದ್ದಾಗ
ಅಡಿಗೆಮನೆಯಲ್ಲಿ
ಸ್ವಲ್ಪ ಹೊತ್ತು
ಕೇಳುತ್ತಿದ್ದೆವು ನಾವಂದು,
ಎಷ್ಟೊತ್ತು ಬೇಕಮ್ಮ ಎಂದು.
ಇಂದು ನಾವಿಲ್ಲಿ
ಅಡಿಗೆಮನೆಯಲ್ಲಿದ್ದಾಗ
ಹೆಚ್ಚು ಹೊತ್ತು,
ಮಕ್ಕಳು ಕೇಳುವಾಗ
ಅನಿಸುತ್ತಿದೆ
ರಾಶಿ ಕೆಲಸಗಳು
ಮುಗಿಯುತ್ತಲೇ ಇಲ್ಲವೆಂದು!
ಚಿಕ್ಕವರಿದ್ದಾಗ ಅಮ್ಮ
ನಮ್ಮ ತುಂಟಾಟಕ್ಕೆ
ಬೇಸತ್ತು ಗದರಿದರೆ
ಈ ಅಮ್ಮನಿಗೆ ನಾವು
ಅರ್ಥವಾಗುವುದೇ ಇಲ್ಲವೇ
ಎಂದು ಗೊಣಗಿದ್ದುಂಟು.
ಈಗ ಒಂದೇ ಮಗು
ಸ್ವಲ್ಪ ಹೇಳಿದ ಮಾತು
ಕೇಳದೇ ಹೋದರೆ
ಇದರೊಂದಿಗೆ
ಹೆಣಗುವುದು ಸಾಧ್ಯವೇ?
ವಟಗುಟ್ಟುವುದುಂಟು.
ಬಾಲ್ಯದಲಿ ನಾವು
ಓದದೇ ಇದ್ದಾಗ
ಅಮ್ಮ ಬುದ್ಧಿ ಹೇಳಿದಾಗ
ಇವರ ವರಾತ
ಯಾವಾಗಲೂ ಇದ್ದದ್ದೇ
ಎಂದು ಕೋಪಿಸಿದ್ದುಂಟು.
ಈಗ ಮಕ್ಕಳು
ಒಂದೆರಡು ಅಂಕಗಳು
ಕಡಿಮೆ ಪಡೆದರೂ
ಬೈದುಹೊಡೆದು
ಆಕಾಶ ಭೂಮಿಗಳ
ಒಂದು ಮಾಡುವುದುಂಟು .
ಭಿನ್ನತೆ ಇರುವುದಿದರಲ್ಲಿ
ಅವರಿಗೆ ಬದುಕು
ಸಂತಸದಿ ಸ್ವೀಕರಿಸಿ
ಯಶಸ್ವಿಯಾಗಿ
ನಿಭಾಯಿಸಬಲ್ಲ
ಒಂದು ಜವಾಬ್ದಾರಿ.
ನಮಗಾದರೋ
ಅದೊಂದು
ಭಾರವಾದ
ನೀರಸವಾದ
ಅನಿವಾರ್ಯ ದಾರಿ.
POEM 57 - ಇಂದಿನ ವಿದ್ಯಾರ್ಥಿಗಳು
ಇಂದಿನ ವಿದ್ಯಾರ್ಥಿಗಳು
ರಿಸಲ್ಟ್ ದಿನ ಅಳುವಿರಿ
ಎಲ್ಲರನ್ನು ತೆಗಳುವಿರಿ
ಎಲ್ಲೆ ಮೀರಿ ದೂರುವಿರಿ
ಜಗತ್ತನ್ನೇ ಖಂಡಿಸುವಿರಿ
ಕಡಿಮೆ ಅಂಕ ಬಂದಿತೆಂದು
ಇಷ್ಟು ಅಂಕ ಸಾಲದೆಂದು
ಫೇಲಾಗಿ ಕೂತೆನೆಂದು
ಮಾನ ಕಳೆದು ಹೋಯಿತೆಂದು
ಎಲ್ಲರ ದೂಷಿಸುವಿರಿ
ದೇವರ ಹಳಿಯುವಿರಿ
ಹಣೆಬರಹ ಎನ್ನುವಿರಿ
ಸುಮ್ಮನೇ ಕೊರಗುವಿರಿ
ಪಠ್ಯಕ್ರಮ ಸರಿಯಿಲ್ಲವೆಂದು
ಪಾಠ ಮಾಡಲಿಲ್ಲವೆಂದು
ಪ್ರಶ್ನೆಗಳೆ ಕ್ಲಿಷ್ಟವೆಂದು
ಸಮಯ ಸಾಲಲಿಲ್ಲವೆಂದು
ತಪ್ಪು ಹುಡುಕಲೊಲ್ಲಿರಿ
ಕಾರಣ ಅರಿಯಲೊಲ್ಲಿರಿ
ಬದಲಾಗಲು ಒಪ್ಪಲೊಲ್ಲಿರಿ
ಸರಿಯಾಗಿ ಓದಲೊಲ್ಲಿರಿ
ಟೀಕಿಸುತ್ತ ಎಲ್ಲರ ಇಂದು
ಸಾಧಿಸಿದ್ದೇನು ನೀವು ಎಂದು
ಕೇಳಬಯಸುವೆ ನಾನಿಂದು
ಉತ್ತರಿಸಿರಿ ನೀವ್ ಜಗಕಿಂದು.
ರಿಸಲ್ಟ್ ದಿನ ಅಳುವಿರಿ
ಎಲ್ಲರನ್ನು ತೆಗಳುವಿರಿ
ಎಲ್ಲೆ ಮೀರಿ ದೂರುವಿರಿ
ಜಗತ್ತನ್ನೇ ಖಂಡಿಸುವಿರಿ
ಕಡಿಮೆ ಅಂಕ ಬಂದಿತೆಂದು
ಇಷ್ಟು ಅಂಕ ಸಾಲದೆಂದು
ಫೇಲಾಗಿ ಕೂತೆನೆಂದು
ಮಾನ ಕಳೆದು ಹೋಯಿತೆಂದು
ಎಲ್ಲರ ದೂಷಿಸುವಿರಿ
ದೇವರ ಹಳಿಯುವಿರಿ
ಹಣೆಬರಹ ಎನ್ನುವಿರಿ
ಸುಮ್ಮನೇ ಕೊರಗುವಿರಿ
ಪಠ್ಯಕ್ರಮ ಸರಿಯಿಲ್ಲವೆಂದು
ಪಾಠ ಮಾಡಲಿಲ್ಲವೆಂದು
ಪ್ರಶ್ನೆಗಳೆ ಕ್ಲಿಷ್ಟವೆಂದು
ಸಮಯ ಸಾಲಲಿಲ್ಲವೆಂದು
ತಪ್ಪು ಹುಡುಕಲೊಲ್ಲಿರಿ
ಕಾರಣ ಅರಿಯಲೊಲ್ಲಿರಿ
ಬದಲಾಗಲು ಒಪ್ಪಲೊಲ್ಲಿರಿ
ಸರಿಯಾಗಿ ಓದಲೊಲ್ಲಿರಿ
ಟೀಕಿಸುತ್ತ ಎಲ್ಲರ ಇಂದು
ಸಾಧಿಸಿದ್ದೇನು ನೀವು ಎಂದು
ಕೇಳಬಯಸುವೆ ನಾನಿಂದು
ಉತ್ತರಿಸಿರಿ ನೀವ್ ಜಗಕಿಂದು.
POEM 56 - ನಿಲ್ಲುವುದೆಂದಿಗೆ?
ನಿಲ್ಲುವುದೆಂದಿಗೆ?
ಅಂದು ಇಟಲಿಯ
ಅಗೋರ
ಮತ್ತೆ ಇಂಗ್ಲೆಂಡ್ ನ
ಜೋನ್ ಆಫ್ ಆರ್ಕ್
ಇಂದು ಮತ್ತೆ ಅಫ್ಘಾನಿಸ್ತಾನದ
ಹೆಣ್ಣುಮಗಳು ಫರ್ಕುಂಡಾ,
ಧರ್ಮದ ಹೆಸರಿನಲ್ಲಿ
ಸ್ತ್ರೀಯರ ಮಾರಣಹೋಮ
ನಿಲ್ಲುವುದೆಂದಿಗೆ?
ಸತ್ಯವನ್ನು ಹೇಳಿದರೆ
ತಲೆದಂಡವೇ?
ಸತ್ಯವ ಪ್ರತಿಪಾದಿಸಿದ
ಜ್ಞಾನವ ಹರಡಿದ
ಅಗೋರಳಿಗೆ ದೊರೆತದ್ದು
ಅಪಮಾನಕರ ಸಾವು.
ಪುರುಷಪ್ರಧಾನ ಧೋರಣೆಯ
ಪ್ರಶ್ನಿಸಿದರೆ ಪಾಖಂಡಿ ಶಿಕ್ಷೆಯೇ?
ಪುರುಷನಂತೆ ರಣರಂಗದಲಿ
ಧೀರಳಾಗಿ ಹೋರಾಡಿದ
ಜೋನ್ ಗೆ ಸಿಕ್ಕಿದ್ದು
ಬೆಂಕಿಯಲ್ಲಿ ಬೇಯುವಿಕೆ.
ಮೌಡ್ಯವ ವಿರೋಧಿಸಿದರೆ
ಮರಣದಂಡನೆಯೇ?
ಮೌಢ್ಯವ ಜನರಲ್ಲಿ
ತುಂಬುತ್ತಿರುವರ ವಿರೋಧಿಸಿದ
ಫರ್ಕುಂಡಾ ಪಡೆದದ್ದು
ಜೀವಂತ ದಹನ.
ಇದು ನಿಜದ ನ್ಯಾಯವೇ?
ಇದು ನಿಜದ ಧರ್ಮವೇ?
ಈ ಮಾರಣಹೋಮ
ನಿಲ್ಲುವುದೆಂದಿಗೆ?
ಸ್ತ್ರೀ ಸಮಾನತೆ
ಮೂಡುವುದೆಂದಿಗೆ?
ಸ್ತ್ರೀ ಸ್ವಾತಂತ್ರ್ಯ
ಬರುವುದೆಂದಿಗೆ?
ಅಂದು ಇಟಲಿಯ
ಅಗೋರ
ಮತ್ತೆ ಇಂಗ್ಲೆಂಡ್ ನ
ಜೋನ್ ಆಫ್ ಆರ್ಕ್
ಇಂದು ಮತ್ತೆ ಅಫ್ಘಾನಿಸ್ತಾನದ
ಹೆಣ್ಣುಮಗಳು ಫರ್ಕುಂಡಾ,
ಧರ್ಮದ ಹೆಸರಿನಲ್ಲಿ
ಸ್ತ್ರೀಯರ ಮಾರಣಹೋಮ
ನಿಲ್ಲುವುದೆಂದಿಗೆ?
ಸತ್ಯವನ್ನು ಹೇಳಿದರೆ
ತಲೆದಂಡವೇ?
ಸತ್ಯವ ಪ್ರತಿಪಾದಿಸಿದ
ಜ್ಞಾನವ ಹರಡಿದ
ಅಗೋರಳಿಗೆ ದೊರೆತದ್ದು
ಅಪಮಾನಕರ ಸಾವು.
ಪುರುಷಪ್ರಧಾನ ಧೋರಣೆಯ
ಪ್ರಶ್ನಿಸಿದರೆ ಪಾಖಂಡಿ ಶಿಕ್ಷೆಯೇ?
ಪುರುಷನಂತೆ ರಣರಂಗದಲಿ
ಧೀರಳಾಗಿ ಹೋರಾಡಿದ
ಜೋನ್ ಗೆ ಸಿಕ್ಕಿದ್ದು
ಬೆಂಕಿಯಲ್ಲಿ ಬೇಯುವಿಕೆ.
ಮೌಡ್ಯವ ವಿರೋಧಿಸಿದರೆ
ಮರಣದಂಡನೆಯೇ?
ಮೌಢ್ಯವ ಜನರಲ್ಲಿ
ತುಂಬುತ್ತಿರುವರ ವಿರೋಧಿಸಿದ
ಫರ್ಕುಂಡಾ ಪಡೆದದ್ದು
ಜೀವಂತ ದಹನ.
ಇದು ನಿಜದ ನ್ಯಾಯವೇ?
ಇದು ನಿಜದ ಧರ್ಮವೇ?
ಈ ಮಾರಣಹೋಮ
ನಿಲ್ಲುವುದೆಂದಿಗೆ?
ಸ್ತ್ರೀ ಸಮಾನತೆ
ಮೂಡುವುದೆಂದಿಗೆ?
ಸ್ತ್ರೀ ಸ್ವಾತಂತ್ರ್ಯ
ಬರುವುದೆಂದಿಗೆ?
POEM 55 - ಮೌನ
ಮೌನ
ಮೌನ ಬಂಗಾರ ಮಾತು ಬೆಳ್ಳಿ
ಹೇಳಿದವರಾರೋ ನಾ ಕಾಣೆ?
ಮೌನ ಜಗಳವ ಸೃಷ್ಟಿಸದಿರಬಹುದು
ಸಾಮರಸ್ಯವ ಬೆಳೆಸುವುದೇ?
ಸಮಸ್ಯೆಗಳನ್ನು ಹೆಚ್ಚಿಸದಿರಬಹುದು
ಪರಿಷ್ಕಾರ ನೀಡುವುದೇ?
ಸಂಬಂಧಗಳ ಹದಗೆಡಿಸದಿರಬಹುದು
ಉತ್ತಮಗೊಳಿಸುವುದೇ?
ಕೋಪವ ಜಾಸ್ತಿ ಮಾಡದಿರಬಹುದು
ಕಡಿಮೆ ಮಾಡುವುದೇ?
ದುಃಖವ ಉಂಟುಮಾಡದಿರಬಹುದು
ನಗುವ ಹರಡುವುದೇ?
ದ್ವೇಷವ ಬೆಳೆಸದಿರಬಹುದು,
ಪ್ರೀತಿಯ ಸೃಜಿಸುವುದೇ?
ಹಗೆತನ ಹರಡದಿರಬಹುದು
ಸ್ನೇಹವ ಬೆಳೆಸುವುದೇ?
ಮೌನ ಬಂಗಾರ ಮಾತು ಬೆಳ್ಳಿ
ಹೇಳಿದವರಾರೋ ನಾ ಕಾಣೆ!!
ಮೌನ ಬಂಗಾರ ಮಾತು ಬೆಳ್ಳಿ
ಹೇಳಿದವರಾರೋ ನಾ ಕಾಣೆ?
ಮೌನ ಜಗಳವ ಸೃಷ್ಟಿಸದಿರಬಹುದು
ಸಾಮರಸ್ಯವ ಬೆಳೆಸುವುದೇ?
ಸಮಸ್ಯೆಗಳನ್ನು ಹೆಚ್ಚಿಸದಿರಬಹುದು
ಪರಿಷ್ಕಾರ ನೀಡುವುದೇ?
ಸಂಬಂಧಗಳ ಹದಗೆಡಿಸದಿರಬಹುದು
ಉತ್ತಮಗೊಳಿಸುವುದೇ?
ಕೋಪವ ಜಾಸ್ತಿ ಮಾಡದಿರಬಹುದು
ಕಡಿಮೆ ಮಾಡುವುದೇ?
ದುಃಖವ ಉಂಟುಮಾಡದಿರಬಹುದು
ನಗುವ ಹರಡುವುದೇ?
ದ್ವೇಷವ ಬೆಳೆಸದಿರಬಹುದು,
ಪ್ರೀತಿಯ ಸೃಜಿಸುವುದೇ?
ಹಗೆತನ ಹರಡದಿರಬಹುದು
ಸ್ನೇಹವ ಬೆಳೆಸುವುದೇ?
ಮೌನ ಬಂಗಾರ ಮಾತು ಬೆಳ್ಳಿ
ಹೇಳಿದವರಾರೋ ನಾ ಕಾಣೆ!!
POEM 52 - ನಿನಗಿದೊ, ನನದೊಂದು ನಮನ
ನಿನಗಿದೊ, ನನದೊಂದು ನಮನ
ಜೀವ ಕೊಟ್ಟ ತಾಯ್ತಂದೆಯರ
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ
ಅಂದು-ಇಂದೂ ಆರೈಕೆ
ಮಾಡುತ್ತಿರುವ, ಮುದ್ದಿನ ಮಗಳೇ
ನಿನಗಿದೊ, ನನದೊಂದು ನಮನ
ಕೈಹಿಡಿದು ಪತಿಯೊಂದಿಗೆ
ಕೊನೆತನಕ ಜೊತೆಗಿರುವ
ಕಷ್ಟಸುಖಗಳ ಒಟ್ಟಾಗಿ ಅನುಭವಿಸುವ
ಛಲ ತೊಟ್ಟ ಸತಿಯೇ
ನಿನಗಿದೊ, ನನದೊಂದು ನಮನ
ಮುದ್ದಾದ ಮಗುವನ್ನು
ಮಮತೆಯಿಂದ ಬೆಳೆಸಿ
ಮಗಳಂತಲ್ಲದೇ ಗೆಳತಿಯಂತೆ
ದಾರಿ ತೋರುತ್ತಿರುವ ತಾಯೇ
ನಿನಗಿದೊ, ನನದೊಂದು ನಮನ
ಗೆಳೆತನದ ನಿಜ ಅರ್ಥ ಬಲ್ಲ
ಎಲ್ಲವ ಹಂಚಿಕೊಳ್ಳಬಲ್ಲ
ಯಾರೇನೇ ಅಂದರೂ ಸ್ನೇಹವ
ನಿಭಾಯಿಸಬಲ್ಲ ಸಖಿಯೇ
ನಿನಗಿದೊ, ನನದೊಂದು ನಮನ
ಎಂತಹ ಸಮಯದಲೂ
ಮಾಸದ ನಗು ಹೊತ್ತು
ಪಡೆದದ್ದಕ್ಕೆ ಪ್ರತಿಯಾಗಿ
ಸಮಾಜಕ್ಕೆ ಸೇವೆ ಸಲಿಸುತ್ತಿರುವ
ನಿನಗಿದೊ, ನನದೊಂದು ನಮನ
ಅಕ್ಕರೆಯ ಮಗಳಾಗಿ
ಒಲುಮೆಯ ಸತಿಯಾಗಿ
ಮಮತೆಯ ಮಾತೆಯಾಗಿ
ಆತ್ಮೀಯ ಗೆಳತಿಯಾಗಿ
ಸಮಾಜಮುಖಿಯಾಗಿರುವ
ನಿನಗಿದೊ, ನನದೊಂದು ನಮನ
ಜೀವ ಕೊಟ್ಟ ತಾಯ್ತಂದೆಯರ
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ
ಅಂದು-ಇಂದೂ ಆರೈಕೆ
ಮಾಡುತ್ತಿರುವ, ಮುದ್ದಿನ ಮಗಳೇ
ನಿನಗಿದೊ, ನನದೊಂದು ನಮನ
ಕೈಹಿಡಿದು ಪತಿಯೊಂದಿಗೆ
ಕೊನೆತನಕ ಜೊತೆಗಿರುವ
ಕಷ್ಟಸುಖಗಳ ಒಟ್ಟಾಗಿ ಅನುಭವಿಸುವ
ಛಲ ತೊಟ್ಟ ಸತಿಯೇ
ನಿನಗಿದೊ, ನನದೊಂದು ನಮನ
ಮುದ್ದಾದ ಮಗುವನ್ನು
ಮಮತೆಯಿಂದ ಬೆಳೆಸಿ
ಮಗಳಂತಲ್ಲದೇ ಗೆಳತಿಯಂತೆ
ದಾರಿ ತೋರುತ್ತಿರುವ ತಾಯೇ
ನಿನಗಿದೊ, ನನದೊಂದು ನಮನ
ಗೆಳೆತನದ ನಿಜ ಅರ್ಥ ಬಲ್ಲ
ಎಲ್ಲವ ಹಂಚಿಕೊಳ್ಳಬಲ್ಲ
ಯಾರೇನೇ ಅಂದರೂ ಸ್ನೇಹವ
ನಿಭಾಯಿಸಬಲ್ಲ ಸಖಿಯೇ
ನಿನಗಿದೊ, ನನದೊಂದು ನಮನ
ಎಂತಹ ಸಮಯದಲೂ
ಮಾಸದ ನಗು ಹೊತ್ತು
ಪಡೆದದ್ದಕ್ಕೆ ಪ್ರತಿಯಾಗಿ
ಸಮಾಜಕ್ಕೆ ಸೇವೆ ಸಲಿಸುತ್ತಿರುವ
ನಿನಗಿದೊ, ನನದೊಂದು ನಮನ
ಅಕ್ಕರೆಯ ಮಗಳಾಗಿ
ಒಲುಮೆಯ ಸತಿಯಾಗಿ
ಮಮತೆಯ ಮಾತೆಯಾಗಿ
ಆತ್ಮೀಯ ಗೆಳತಿಯಾಗಿ
ಸಮಾಜಮುಖಿಯಾಗಿರುವ
ನಿನಗಿದೊ, ನನದೊಂದು ನಮನ
Subscribe to:
Posts (Atom)