ಗಣರಾಜ್ಯೋತ್ಸವ
ಬ್ರಿಟಿಷರ ಅಧಿಪತ್ಯಕೆ
ಸಾಮ್ರಾಜ್ಯಶಾಹಿ ಆಡಳಿತಕೆ
ಮಹಾರಾಜರ ಪದ್ಧತಿಗೆ
ಅಂತ್ಯ ಹಾಡಿದ ದಿನವಿದು.
ಪ್ರಜೆಗಳೇ ಪ್ರಭುಗಳೆಂದು
ಸಂವಿಧಾನ ಶ್ರೇಷ್ಠವೆಂದು
ಜನ ಸಾರ್ವಭೌಮರೆಂದು
ಜಗಕೆ ಸಾರಿದ ದಿನವಿದು.
ವಂಶಾಧಿಕಾರ ಇಲ್ಲವೆಂದು
ಚುನಾವಣೆಯೇ ಮುಖ್ಯವೆಂದು
ಎಲ್ಲ ಸ್ಥಾನ ಎಲ್ಲರಿಗೆಂದು
ಘೋಷ ಎದ್ದ ದಿನವಿದು
ಎಲ್ಲರೂ ಸಮಾನರೆಂದು
ಜಾತಿ ಧರ್ಮ ಬೇಡವೆಂದು
ಎಲ್ಲರೂ ಸೋದರರೆಂದು
ಪ್ರಕಟಪಡಿಸಿದ ದಿನವಿದು
ಎಲ್ಲರೂ ಸ್ವತಂತ್ರರೆಂದು
ಆತ್ಮಗೌರವ ಉಂಟು ಎಂದು
ನ್ಯಾಯವೆಲ್ಲರ ಪಾಲೆಂದು
ಸಾರಿ ಹೇಳಿದ ದಿನವಿದು.
ದೇಶದ ಐಕ್ಯತೆಗೆಂದು
ಎಲ್ಲರ ಸಮೃದ್ಧಿಗೆಂದು
ಒಗ್ಗೂಡಿ ನಡೆಯೋಣವೆಂದು
ಕಂಕಣ ತೊಟ್ಟ ದಿನವಿದು.
ಎಲ್ಲ ಧೀರ ಯೋಧರಂದು
ಮಾಡಿದ ಬಲಿದಾನವಿಂದು
ನಾವು ನೆನಪಿಸಿಕೊಂಡು
ಸಾಗೋಣ ದೇಶ ಕಟ್ಟಲೆಂದು.
ಬ್ರಿಟಿಷರ ಅಧಿಪತ್ಯಕೆ
ಸಾಮ್ರಾಜ್ಯಶಾಹಿ ಆಡಳಿತಕೆ
ಮಹಾರಾಜರ ಪದ್ಧತಿಗೆ
ಅಂತ್ಯ ಹಾಡಿದ ದಿನವಿದು.
ಪ್ರಜೆಗಳೇ ಪ್ರಭುಗಳೆಂದು
ಸಂವಿಧಾನ ಶ್ರೇಷ್ಠವೆಂದು
ಜನ ಸಾರ್ವಭೌಮರೆಂದು
ಜಗಕೆ ಸಾರಿದ ದಿನವಿದು.
ವಂಶಾಧಿಕಾರ ಇಲ್ಲವೆಂದು
ಚುನಾವಣೆಯೇ ಮುಖ್ಯವೆಂದು
ಎಲ್ಲ ಸ್ಥಾನ ಎಲ್ಲರಿಗೆಂದು
ಘೋಷ ಎದ್ದ ದಿನವಿದು
ಎಲ್ಲರೂ ಸಮಾನರೆಂದು
ಜಾತಿ ಧರ್ಮ ಬೇಡವೆಂದು
ಎಲ್ಲರೂ ಸೋದರರೆಂದು
ಪ್ರಕಟಪಡಿಸಿದ ದಿನವಿದು
ಎಲ್ಲರೂ ಸ್ವತಂತ್ರರೆಂದು
ಆತ್ಮಗೌರವ ಉಂಟು ಎಂದು
ನ್ಯಾಯವೆಲ್ಲರ ಪಾಲೆಂದು
ಸಾರಿ ಹೇಳಿದ ದಿನವಿದು.
ದೇಶದ ಐಕ್ಯತೆಗೆಂದು
ಎಲ್ಲರ ಸಮೃದ್ಧಿಗೆಂದು
ಒಗ್ಗೂಡಿ ನಡೆಯೋಣವೆಂದು
ಕಂಕಣ ತೊಟ್ಟ ದಿನವಿದು.
ಎಲ್ಲ ಧೀರ ಯೋಧರಂದು
ಮಾಡಿದ ಬಲಿದಾನವಿಂದು
ನಾವು ನೆನಪಿಸಿಕೊಂಡು
ಸಾಗೋಣ ದೇಶ ಕಟ್ಟಲೆಂದು.
No comments:
Post a Comment